Slide
Slide
Slide
previous arrow
next arrow

ಅಂಬೇಡ್ಕರರ ಮಾರ್ಗದಲ್ಲಿ ನಡೆಯೋಣ: ಎಲಿಷಾ ಯಲಕಪಾಟಿ

300x250 AD

ಕಾರವಾರ: ಸಂವಿಧಾನ ಶಿಲ್ಪಿ ಹಾಗೂ ದೇಶಕಂಡ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರರವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪçಶ್ಯತೆ ನಿವಾರಣೆ, ಪ್ರಜೆಗಳ ಮೂಲಭೂತ ಕರ್ತವ್ಯ, ಸಮಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಇನ್ನೂ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಹಾಗಾಗಿ ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ಹೇಳಿದರು.

ಬಿಣಗಾ ಜೀವನ ನಗರದಲ್ಲಿ 132ನೇ ಡಾ.ಬಿ.ಆರ್.ಅಂಬೇಡ್ಕರರವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೆಹಬೂಬ ಇನಾಮದಾರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಕಾರ್ಯದರ್ಶಿ ಮೊಹಮ್ಮದ ಇನಾಮದಾರ, ಘಟಕದ ಅಧ್ಯಕ್ಷ ಸುರೇಶ, ಉಪಾಧ್ಯಕ್ಷ ಶರತ ಚಲವಾದಿ, ಘಟಕ ಕಾರ್ಯದರ್ಶಿ ಹಬಿಬ್ ಇನಾಮದಾರ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಇನಾಮದಾರ, ಕಾರ್ಯಾಧ್ಯಕ್ಷ ತುಕಾರಾಮ ಪೂಜಾರಿ, ಖಜಾಂಚಿ ಜಂಗಲ್ ಭಾಷಾ, ದುರ್ಗಪ್ಪಾ, ಹುಸೇನ್, ಮೊಹಮ್ಮದ ನಾಗೂರ್ ಹಾಗೂ ಇನ್ನಿತರರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top