• Slide
    Slide
    Slide
    previous arrow
    next arrow
  • ವಿದ್ಯುತ್ ಕಂಬಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಚಾಲಕ ಸಾವು

    300x250 AD

    ಯಲ್ಲಾಪುರ: ಟ್ರ್ಯಾಕ್ಟರ್ ಮೇಲೆ ಬೀಳುತ್ತಿರುವ ಮರದಿಂದ ತಪ್ಪಿಸಿಕೊಳ್ಳಲು ಹೋದ ಟ್ರ್ಯಾಕ್ಟರ್ ಚಾಲಕ, ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಚಾಲಕನ ಮೇಲೆ ಬಿದ್ದು, ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕಣ್ಣಿಗೇರಿಯ ಸಿದ್ದಿ ಕಾಲನಿ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

    ತಾಲ್ಲೂಕಿನ ಮದ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸೂರಿನ ರಾಜೇಂದ್ರ ಫಕೀರಪ್ಪ ಕಳಸೂರಕರ್(43) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಕಳಸೂರಿನ ತನ್ನ ಅಣ್ಣ ಲಕ್ಷ್ಮಣ ಕಳಸೂರಕರ್ ಇವರ ಮನೆಯಿಂದ ಅಡಿಕೆ ಸಸಿಗಳನ್ನು ತುಂಬಿಕೊಂಡು ವಡೆಹುಕ್ಕಳಿಯ ಭಾಸ್ಕರ್ ಎಂಬವರ ಮನೆಯಲ್ಲಿ ಇಳಿಸಿ, ಮಳೆ ಬರುತ್ತಿರುವ ಕಾರಣ ವೇಗವಾಗಿ ವಾಪಸ್ ಬರುತ್ತಿರುವಾಗ ಕಣ್ಣಿಗೇರಿಯ ಸಿದ್ದಿ ಕಾಲನಿ ಬಳಿ ರಸ್ತೆ ಬದಿಯಲ್ಲಿದ್ದ ಒಣಗಿದ ಮರ ಬೀಳುತ್ತಿರುವುದನ್ನು ಕಂಡು ಟ್ರಾಕ್ಟರ್ ಬಲ ಬದಿಗೆ ಚಲಾಯಿಸಿದಾಗ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top