• Slide
    Slide
    Slide
    previous arrow
    next arrow
  • ಫೆ.22ಕ್ಕೆ ಶ್ರೀಕೃಷ್ಣ ಸ್ಮರಣ, ತಾಳಮದ್ದಲೆ

    300x250 AD

    ಶಿರಸಿ: ಇಲ್ಲಿನ ಶ್ರೀಕೃಷ್ಣ ಸ್ಮರಣವು ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ಸಹಕಾರದಲ್ಲಿ ಹಮ್ಮಿಕೊಂಡ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಸಮಾರಂಭ ಹಾಗೂ ತಾಳಮದ್ದಲೆಯನ್ನು ಫೆ.22ರಂದು ಸಂಜೆ 4.30ಕ್ಕೆ ನಗರದ ಟಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶ್ರೀಕೃಷ್ಣ ಸ್ಮರಣ ಪುರಸ್ಕಾರವನ್ನು ಭಾಗವತ ಕೇಶವ ಹೆಗಡೆ ಕೊಳಗಿ, ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಅವರಿಗೆ ಪ್ರದಾನ ಮಾಡಲಾಗುತ್ತಿದ್ದು, ಅತಿಥಿಗಳಾಗಿ ವೈಶಾಲಿ ವಿ.ಪಿ.ಹೆಗಡೆ, ಅಧ್ಯಕ್ಷತೆಯನ್ನು ನೇತ್ರತಜ್ಞ ಡಾ. ಎಚ್‌. ಎಸ್.ಮೋಹನ ಪಾಲ್ಗೊಳ್ಳುವರು.

    ಬಳಿಕ ಶಲ್ಯ ಸಾರಥ್ಯ ತಾಳಮದ್ದಲೆ ನಡೆಯಲಿದ್ದು, ಕೌರವನಾಗಿ ಅಶೋಕ ಭಟ್ ಉಜಿರೆ, ಕರ್ಣನಾಗಿ ಮೋಹನ ಹೆಗಡೆ, ಶಲ್ಯನಾಗಿ ಉಮಾಕಾಂತ ಭಟ್‌ ಕೆರೇಕೈ ಭಾಗವಹಿಸುವರು. ಭಾಗವತರಾಗಿ ಕೊಳಗಿ, ಮದ್ದಲೆಯಲ್ಲಿ ಶಂಕರ‌ ಭಾಗವತ ಸಹಕಾರ‌ ನೀಡಲಿದ್ದಾರೆ ಎಂದು‌ ಪ್ರಕಟನೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top