Slide
Slide
Slide
previous arrow
next arrow

ಇಂದು ವಾಜಗದ್ದೆಯಲ್ಲಿ ಯಕ್ಷಗಾನ ಪ್ರದರ್ಶನ

300x250 AD

ಸಿದ್ದಾಪುರ: ಯಕ್ಷಚಂದನ ದಂಟಕಲ್ ಇವರಿಂದ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಸನ್ಮಾನ ಹಾಗೂ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನ ಇಂದು ಜೂ.6ರಂದು ಸಂಜೆ 6.30ರಿಂದ ನಡೆಯಲಿದೆ.

ಶಾಸಕ ಭೀಮಣ್ಣ ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆವಹಿಸುವರು. ಉಪೇಂದ್ರ ಪೈ, ಅನಂತಮೂರ್ತಿ ಹೆಗಡೆ, ಡಾ.ಕೆ.ಶ್ರೀಧರ ವೈದ್ಯ, ರವೀಂದ್ರ ಹೆಗಡೆ ಹಿರೇಕೈ, ರಾಘವೇಂದ್ರ ಶಾಸ್ತ್ರಿ ಬಿಳಗಿ, ಎಸ್.ಎಂ.ಹೆಗಡೆ ಪೇಟೆಸರ ಉಪಸ್ಥಿತರಿರುತ್ತಾರೆ. ಗೋಪಾಲ ಹೆಗಡೆ ಹುಲಿಮನೆ ಅಭಿನಂದನಾ ಮಾತನಾಡಲಿದ್ದಾರೆ.
ನಂತರ ಪ್ರದರ್ಶನಗೊಳ್ಳಲಿರುವ ಚಂದ್ರಹಾಸ ಚರಿತ್ರೆ ಯಕ್ಷಗಾನದ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸತೀಶ ಹೆಗಡೆ ದಂಟಕಲ್, ನಂದನ ಹೆಗಡೆ ದಂಟಕಲ್, ಶಂಕರ ಭಾಗವತ, ಗಣೇಶ ಗಾಂವ್ಕರ್, ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಲ್ಕೋಡು, ಕಾರ್ತಿಕ ಚಿಟ್ಟಾಣಿ, ವಿನಯ ಬೇರೊಳ್ಳಿ, ನಾಗೇಂದ್ರ ಮೂರೂರು, ಮಹಾಬಲೇಶ್ವರ ಗೌಡ, ನಿತಿನ್ ದಂಕಟಲ್, ರಕ್ಷಿತ ಕುಳಿಮನೆ, ಕು.ವೆಂಕಟೇಶ ಹೆಗಡೆ ವಾಟಗಾರ ಪಾತ್ರನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top