Slide
Slide
Slide
previous arrow
next arrow

ಫೆ.23ಕ್ಕೆ ಉಪನ್ಯಾಸ, ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ಗಾಯತ್ರಿ ಗೆಳೆಯರ ಬಳಗದಿಂದ ಫೆ‌.23, ಗುರುವಾರ ಇಳಿಹೊತ್ತು 4 ಘಂಟೆಯಿಂದ ನಗರದ ಹಾಲೊಂಡ ಬಡಾವಣೆಯ ಗಾಯತ್ರೀ ಗೆಳೆಯರ ಬಳಗದ ಕಟ್ಟಡದಲ್ಲಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಕ್ಕಳ ಸಾಹಿತ್ಯದ ಸುತ್ತಮುತ್ತದ ಕುರಿತು ಕವಿ ತಮ್ಮಣ್ಣ ಬೀಗಾರ ಉಪನ್ಯಾಸ‌ ನೀಡಲಿದ್ದು, ಅತಿಥಿಗಳಾಗಿ ಲೋಕಧ್ವನಿ ಸುದ್ದಿ ಸಂಪಾದಕಿ ವಿನುತಾ ಹೆಗಡೆ ಅತಿಥಿಗಳಾಗಿ ಭಾಗವಹಿಸುವರು.
ಕೊರೋನಾ ವಾರಿಯರ್ ಆಗಿದ್ದ ರವಿನಾ ರೊಡ್ರಿಗ್ಸ್’ಗೆ ಸಮ್ಮಾ‌ನ ನಡೆಯಲಿದೆ.
ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕ ಮನು ಹೆಗಡೆ ಗಾಯನ ಪ್ರಸ್ತುತಪಡಿಸಲಿದ್ದು,ತಬಲಾದಲ್ಲಿ ರಾಮದಾಸ ಭಟ್, ಹಾರ್ಮೋನಿಯಂನಲ್ಲಿ ಭರತ ಹೆಗಡೆ, ಹೆಬ್ಬಲಸು ಭಾಗವಹಿಸುವರು ಎಂದು ಸಂಘಟಕರ ಪರವಾಗಿ ವಿ.ಜಿ.ಗಾಯತ್ರಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top