ಶಿರಸಿ: ಜೂ.5 ರಂದು ಶಾಲಾ ಶಿಕ್ಷಣ ಇಲಾಖೆ, ಶಿರಸಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ, ಭಾರತ ಸೇವಾದಳ ಜಿಲ್ಲಾ ಹಾಗೂ ತಾಲೂಕಾ ಸಮಿತಿ, ಶಿರಸಿ, ಅರಣ್ಯ ಇಲಾಖೆ, ಬನವಾಸಿ ವಲಯ ಹಾಗೂ ನೆಹರು ಸ್ಮಾಕರ ಶಿಕ್ಷಣ ಸಮಿತಿ, ನೆಹರು ಪ್ರೌಢಶಾಲೆ, ಓಣಿಕೇರಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರದಲ್ಲಿ ಅರಣ್ಯಾಧಿಕಾರಿಗಳಾದ ಮಂಜುನಾಥ ಗಂಗೇಮತ, DRFO ದಯಾನಂದ ಬೋರಕರ, ಈಶ್ವರ ನಾಯ್ಕ, ಅರುಣ ಗೌಡ, VFC ಅಧ್ಯಕ್ಷರು, ಸೇವಾದಳ ಅಧ್ಯಕ್ಷ ಅಶೋಕ ಭಜಂತ್ರಿ, ಸೇವಾದಳ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ಸೇವಾದಳ ಕೋಶಾಧ್ಯಕ್ಷ ಕುಮಾರ ನಾಯ್ಕ, ಅಂತರಾಷ್ಟ್ರೀಯ ಕ್ರೀಡಾಪಟು ಪ್ರಭಾಕರ ಎನ್. ಜೋಗಳೇಕರ, ಸುಗಾವಿ ಗ್ರಾ.ಪಂ. ಸದಸ್ಯೆ ಶ್ರೀಮತಿ ಮಮತಾ ರಾಜಪ್ಪ, ಮುಖ್ಯ ಶಿಕ್ಷರಾದ ರಾಜಪ್ಪ ಹೆಚ್., ಶಿಕ್ಷಕ ಮತ್ತು ಶಿಕ್ಷಕೇತರ ವೃಂದ ಹಾಗೂ ಶಾಲೆಯ ಎಲ್ಲಾ ಮಕ್ಕಳು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು. ಕಾರ್ಯಕ್ರಮದಲ್ಲಿ ಬಿ.ಬಿ. ಮಾಲಿಪಾಟೀಲ, ಶಿವಾನಂದ ಗಡದೆ, ಸುಧೀರ ಹೇಮಾದ್ರಿ, ದೀಪಕ ಹೆಗಡೆ, ಶ್ರೀಮತಿ ಮಮತಾ ಹೆಗಡೆ, ಶ್ರೀಮತಿ ಮಮತಾ ಬಂಗ್ಲೆ, ಶ್ರೀಮತಿ ಶುಭಾ ಭಟ್ಟ, ಕುಮಾರ ದರ್ಶನ ಜಕ್ಕಣ್ಣನವರ್ ಉಪಸ್ಥಿತರಿದ್ದರು. ನೆಹರು ಸ್ಮಾರಕ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಪಾದ ರಾಯ್ಸದ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾಕಾರ್ಯಕ್ರಮದಲ್ಲಿ ಅಶೋಕ ಭಜಂತ್ರಿ ಸೇವಾದಳ ಹಾಗೂ ಪರಿಸರ ಕುರಿತು ಮಾಹಿತಿ ನೀಡಿದರು. ಮಂಜುನಾಥ ಗಂಗೇಮತರವರು ಪರಿಸರದಲ್ಲಿ ಹೆಚ್ಚುತ್ತಿರುವ ತಾಪಕ್ಕೆ ಅರಣ್ಯ ನಾಶವೇ ಕಾರಣ ಎಂದು ತಿಳಿಸುತ್ತಾ ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದರು. ಕುಮಾರ ನಾಯ್ಕ ಪ್ರತಿಯೊಬ್ಬರು ಒಂದು ಗಿಡ ನೆಟ್ಟು ಬೆಳೆಸಿದರೆ ಸಾಕು ಪರಿಸರ ನಮ್ಮೆಲ್ಲರನ್ನೂ ಕಾಪಾಡುತ್ತದೆ ಎನ್ನುವ ಮೂಲಕ ಮಕ್ಕಳು ಪರಿಸರ ಪ್ರೇಮಿಗಳಾಗುವಂತೆ ಹುರಿದುಂಬಿಸಿದರು. ರಾಮಚಂದ್ರ ಹೆಗಡೆ ಸೇವಾದಳದ ಮಹತ್ವ ತಿಳಿಸುವುದರೊಂದಿಗೆ ಕಾಡಿನ ಮಹತ್ವ ತಿಳಿಸಿದರು. ಪ್ರಭಾಕರ ಜೋಗಳೇಕರ ಆರೋಗ್ಯವಂತರಾಗಿರಲು ನಮ್ಮ ಸುತ್ತಲಿನ ಪರಿಸರವೇ ಕಾರಣ ಎನ್ನುತ್ತಾ ಕ್ರೀಡೆಯಲ್ಲಿ ಭಾಗವಹಿಸುವಂತೆ ಕಿವಿಮಾತು ಹೇಳಿದರು. ರಾಜಪ್ಪ ಹೆಚ್. ಶಾಲೆಯ ಸುತ್ತ ಗಿಡಮರಗಳನ್ನು ಬೆಳೆಸಿ, ಉತ್ತಮ ಪರಿಸರ ನಿರ್ಮಿಸೋಣ ಎಂದರು. ಶ್ರೀಮತಿ ಮಮತಾ ರಾಜಪ್ಪರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ವಿತರಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರಾದ ರಾಜಪ್ಪ ಹೆಚ್. ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಮಮತಾ ಹೆಗಡೆಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಮಮತಾ ಬಂಗ್ಲೆ ವಂದನಾರ್ಪಣಾ ಕಾರ್ಯಕ್ರಮ ನಡೆಸಿಕೊಟ್ಟರು.