Slide
Slide
Slide
previous arrow
next arrow

ಅ.16 ರಂದು ಚುಟುಕು ಕವಿಗೋಷ್ಠಿ

300x250 AD

ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಶಿರಸಿ, ಶೈಕ್ಷಣಿಕ ಜಿಲ್ಲಾ ಘಟಕ, ಶಿರಸಿ ಹಾಗೂ ಇವರ ಸಹಯೋಗದಲ್ಲಿ ಅಕ್ಟೋಬರ್ 16 ರವಿವಾರದಂದು ದಶಮಾನೋತ್ಸವ ಸಮಾರಂಭ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಹಾಗೂ ಚುಟುಕು ಕವಿಗೋಷ್ಠಿ ನಡೆಯಲಿದೆ.

ಗಣೇಶ ನೇತ್ರಾಲಯನಯನ ಸಭಾಂಗಣದಲ್ಲಿ ಬೆಳಿಗ್ಗೆ 9-30 ರಿಂದ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ನಾಟಿ ವೈದ್ಯ ಹಾಗೂ ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಡಿ. ಎಸ್. ನಾಯ್ಕ, ಹಿರಿಯ ಸಾಹಿತಿಗಳು, ನಡೆಸಿಕೊಡಲಿದ್ದಾರೆ. ಮಹೇಶಕುಮಾರ ಹನಕೆರೆ, ಕೃಷ್ಣಮೂರ್ತಿ ಕುಲಕರ್ಣಿ,ಭಾಗೀರಥಿ ಹೆಗಡೆ,ಎಂ. ಎಸ್‌. ಹೆಗಡೆ, ಕ್ಷೇತ್ರಶಿಕ್ಷಣಾಧಿಕಾರಿಗಳು, ಜಿ. ವಿ. ಭಟ್ಟ, ಕೊಪ್ಪಲತೋಟ, ವೇಣುಗೋಪಾಲ ಮದ್ಗುಣಿ, ಮತ್ತಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

300x250 AD

ಚುಟುಕು ಸಾಹಿತ್ಯ ನಡೆದುಬಂದ ದಾರಿ, ಉತ್ತರ ಕನ್ನಡದ ಸಾಹಿತ್ಯಸಿರಿ ಮೊದಲಾದ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು ಪ್ರಮುಖ ಸಾಹಿತಿಗಳು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಇಳಿಹೊತ್ತು 3-00 ರಿಂದ 4-00ರವರೆಗೆ ನಡೆಯಲಿದ್ದು ಸಾಹಿತ್ಯಾಸಕ್ತರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Share This
300x250 AD
300x250 AD
300x250 AD
Back to top