Slide
Slide
Slide
previous arrow
next arrow

ಎಸ್ಎಸ್ಎಲ್‌ಸಿಯಲ್ಲಿ ಸಿದ್ದಾಪುರಕ್ಕೆ ರಾಜ್ಯದಲ್ಲಿ ದ್ವಿತೀಯ ಸ್ಥಾನ: ಅಧಿಕಾರಿಗಳಿಗೆ ಅಭಿನಂದನೆ

300x250 AD

ಸಿದ್ದಾಪುರ: 2024-25 ಶೈಕ್ಷಣಿಕ ವರ್ಷದಲ್ಲಿ ಸಿದ್ದಾಪುರ ತಾಲೂಕು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 95.20 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ.ಹದಿನೆಂಟು ವಿದ್ಯಾರ್ಥಿಗಳು ರಾಜ್ಯ ಮಟ್ಟದ ರ‌್ಯಾಂಕ್ ಪಡೆದಿದ್ದಾರೆ. ಅತಿ ಹೆಚ್ಚು ಹದಿನಾರು ಪ್ರೌಢಶಾಲೆಗಳು ಪ್ರತಿಶತ ನೂರು ಫಲಿತಾಂಶ ದಾಖಲಿಸಿದೆ. ಈ ಎಲ್ಲ ಸಾಧನೆಗಳಿಗೆ ಉತ್ತಮ ಮಾರ್ಗದರ್ಶನ ನೀಡಿದ ಕ್ಷೇತ್ರಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯಕುಮಾರ ಕೆ.ಎಂ ಇವರನ್ನು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕಾ ಹಂತದ ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷರಾದ ಸತೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯದರ್ಶಿ ಗುರುರಾಜ ನಾಯ್ಕ ಅಭಿನಂದನೆ ನುಡಿ ಹೇಳಿದರು. ವೇದಿಕೆಯಲ್ಲಿ ಪಿ. ಎಂ.ಪೋಷಣ ಸಹಾಯಕ ನಿರ್ದೇಶಕರಾದ ಉದಯ ಮೇಸ್ತ ಶಿಕ್ಶಣ ಸಂಯೋಜಕರಾದ ಮಂಜುನಾಥ ಶಾಸ್ತ್ರಿ, ನೌಕರರ ಸಂಘದ ಕಾರ್ಯದರ್ಶಿ ನಾಗರಾಜ ಮಡಿವಾಳ, ಎಂ. ಕೆ. ನಾಯ್ಕ, ವಿಜಯಲಕ್ಷ್ಮಿ ಬಿ, ಸುಜಾತ ಎಚ್, ವಂದನ ಕಲಭಾಗ,ಹೊಳೆಲಿಂಗ ಬಿ. ಎಚ್, ಜಿ.ಜಿ.ಹೆಗಡೆ, ನಾಗರಾಜ ನಾಯ್ಕ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top