Slide
Slide
Slide
previous arrow
next arrow

ಜಿಲ್ಲಾ ರೈತ ಮೊರ್ಚಾದಿಂದ ಭಾಜಪಾ ಸದಸ್ಯತಾ ಅಭಿಯಾನ

300x250 AD

ಅಂಕೋಲಾ: ಜಿಲ್ಲಾ ರೈತ ಮೋರ್ಚಾ ಅಂಕೋಲಾ ಮಂಡಲ, ಶಕ್ತಿ ಕೇಂದ್ರ ಡೊಂಗ್ರಿ, ಶೇವ್ಕಾರ ಬೂತ್ ನ ಸಹಯೋಗದಲ್ಲಿ ಬಿಜೆಪಿ ಪಕ್ಷದ ಮೆಗಾ ಸದಸ್ಯತಾ ಅಭಿಯಾನವನ್ನು ಅಂಕೋಲಾ ತಾಲೂಕಿನ ತುತ್ತತುದಿ ಗ್ರಾಮವಾದ ಕೈಗಡಿಯಲ್ಲಿ ನಡೆಸಲಾಯಿತು.

ಈ ಕೈಗಡಿ ಗ್ರಾಮವು ಯಲ್ಲಾಪುರ, ಶಿರಸಿ ಮತ್ತು ಅಂಕೋಲಾ ಈ ಮೂರು ತಾಲೂಕುಗಳ ಗಡಿಯು ಆಗಿದೆ. ಸನಾತನ ಧರ್ಮ, ಸಂಸ್ಕೃತಿ, ನೆಲ, ಜಲದ ರಕ್ಷಣೆಗಾಗಿ ಬಿಜೆಪಿ ಪಕ್ಷದ ಸದಸ್ಯರಾಗಿ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಬೇಕೆಂದು ರೈತ ಮೊರ್ಚಾ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಭಟ್ಟ ಕಲ್ಲೇಶ್ವರ ಕರೆನೀಡಿದರು. ಈ ಸಂದರ್ಭದಲ್ಲಿ ರೈತ ಮೊರ್ಚಾ ಜಿಲ್ಲಾ ಕಾರ್ಯದರ್ಶಿ ವಿ.ಎಸ್. ಭಟ್ಟ, ಡೊಂಗ್ರಿ ಶಕ್ತಿ ಕೇಂದ್ರ ಪ್ರಮುಖ ಸುಧಾಕರ ಭಟ್ಟ ಬೂತ್ ಅಧ್ಯಕ್ಷ ಎಮ್. ಟಿ. ಹೆಗಡೆ, ಬೂತ್ ಕಾರ್ಯದರ್ಶಿ ರಾಘವೇಂದ್ರ ಹೆಬ್ಬಾರ, ಕೃಷ್ಣ ಕುಣಬಿ, ಶಶಿಕಲಾ ಕುಣಬಿ, ಯಂಕಣ್ಣ ಕುಣಬಿ, ಪಾರ್ವತಿ ಕುಣಬಿ ಸ್ಥಳೀಯರು ಮುಂತಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top