Slide
Slide
Slide
previous arrow
next arrow

ಕೆಕ್ಕಾರಿನಲ್ಲಿ ನವರಾತ್ರಿ ಉತ್ಸವ ಸಂಪನ್ನ

300x250 AD

ಹೊನ್ನಾವರ :  ಕೆಕ್ಕಾರಿನ ರಘೋತ್ತಮ ಮಠದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಸಾನಿಧ್ಯದಲ್ಲಿ  ನವರಾತ್ರಿಯ ಉತ್ಸವವು ಸಂಭ್ರಮದಿಂದ ನಡೆಯಿತು. ಪ್ರತಿನಿತ್ಯ ಬೆಳಗಿನಿಂದ ಸಂಜೆವರೆಗೆ ಪೂಜೆ, ಹವನ, ಆಶೀರ್ವಚನ ಮಾತೆಯರಿಂದ ಕುಂಕುಮಾರ್ಚನೆ, ಸ್ತೋತ್ರ ಪಠಣ, ರಾಜರಾಜೇಶ್ವರಿ ದೇವಿಗೆ ಉಡಿ ಸಮರ್ಪಣೆ ಮುಂತಾದ ಧಾರ್ಮಿಕ ಚಟುವಟಿಕೆಗಳು ನಡೆದವು. ಪ್ರತಿ ಕಾರ್ಯಕ್ರಮದಲ್ಲಿ ಶಿಷ್ಯರ ಪಾಲ್ಗೊಳ್ಳುವಿಕೆಯ ರೀತಿಯು ಅನ್ಯೋನ್ಯವಾಗಿತ್ತು.

ಈ ಅವಧಿಯಲ್ಲಿ ಮಠದ ದೇವಸ್ಥಾನಗಳಲ್ಲಿ ಹಾಗೂ ವಿವಿಧ ಪೂಜಾಸ್ಥಳಗಳಲ್ಲಿ ನವರಾತ್ರಿಯ ಎಲ್ಲ ದಿನಗಳಲ್ಲಿ ಕುಮಟಾ ತಾಲೂಕಿನ ಮುರೂರಿನ ಯುವ ಕಲಾವಿದ ಶಿವಮೂರ್ತಿ ಭಟ್ಟ ಅವರು ವೈವಿಧ್ಯಮಯ ಪುಷ್ಪಾಲಂಕಾರಗಳನ್ನು ಮಾಡಿ ಗಮನಸೆಳೆದಿದ್ದಾರೆ.

300x250 AD

ಇಂಡಿಯಾ ಬುಕ್‌ ಆಫ್ ರೆಕಾರ್ಡ್, ಏಶಿಯಾ ಬುಕ್ ಆಫ ರೆಕಾರ್ಡ್ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ವಿವಿಧ ಪ್ರಶಸ್ತಿ ಗಳನ್ನು ಪಡೆದಿದ್ದಾರೆ.

Share This
300x250 AD
300x250 AD
300x250 AD
Back to top