Slide
Slide
Slide
previous arrow
next arrow

ಸೆ.28ಕ್ಕೆ ರಕ್ತದಾನ ಶಿಬಿರ ; ಗೋಪಾಲಕೃಷ್ಣ ವೈದ್ಯ ಮಾಹಿತಿ

300x250 AD

ಅಂಕೋಲಾ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಭಾಜಪಾ‌ ಅಂಕೋಲಾ‌‌ ಮಂಡಲ, ಯುವಮೋರ್ಚಾ, ಅಗಸೂರು ಮಹಾಶಕ್ತಿ ಕೇಂದ್ರ, ಡೋಂಗ್ರಿ ಶಕ್ತಿ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದಲ್ಲಿ ಸೆ.28 ಶನಿವಾರದಂದು ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು , ಶ್ರೀದೇವಿ ಮತ್ತು ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ,ಗೋಪಾಲಕೃಷ್ಣ ಯುವಕ ಮಂಡಲ ಮತ್ತು ಶಾರದಾಂಬಾ ಯುವತಿ ಮಂಡಲ ಅಗಸೂರು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಲ್ಲಿ ಕಲ್ಲೇಶ್ವರದ ಶ್ರೀದೇವಿ ಮತ್ತು ಗೋಪಾಲಕೃಷ್ಣ ಸಭಾಭವನದಲ್ಲಿ ಆಯೋಜಿಸಲಾಗಿದೆ‌.

ರಕ್ತದಾನ ಜೀವದಾನ 18 ವರ್ಷಕ್ಕೆ ಮೇಲ್ಪಟ್ಟ ಆರೋಗ್ಯವಂತರು ಯಾರು ಬೇಕಾದರೂ ಬಂದು ರಕ್ತದಾನ ಮಾಡಬಹುದು,ಭಾಗವಹಿಸಿದವರಿಗೆ ಎಸ್,ಡಿ,ಜೆ,ಚೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತಕೇಂದ್ರ ಇವರ ವತಿಯಿಂದ ಪ್ರಶಂಸಾ ಪತ್ರ ನೀಡಲಾಗುತ್ತದೆ. .ಬೆಳಿಗ್ಗೆ 10.30 ಯಿಂದ ಮದ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸಂಘಟನೆಯ ಪರವಾಗಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top