Slide
Slide
Slide
previous arrow
next arrow

ಶಟಲ್ ಬ್ಯಾಡ್ಮಿಂಟನ್: ರಾಜ್ಯಮಟ್ಟಕ್ಕೆ ದಾಂಡೇಲಿಯ ಪ್ರತಿಭೆಗಳು

300x250 AD

ದಾಂಡೇಲಿ : ಶಿರಸಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಬಂಗೂರುನಗರ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ಪ್ರತಿಭೆಗಳಾದ ನವನೀತ್ ನವೀನ್ ಕಾಮತ್ ಮತ್ತು ಸಾಜನ್ ಸೈಯದ್ ಸಮದ್ ಇವರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ದಾಂಡೇಲಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.

ಸಿಂಗಲ್ ವಿಭಾಗದಲ್ಲಿ ನವನೀತ್ ಕಾಮತ್ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಡಬಲ್ಸ್ ವಿಭಾಗದಲ್ಲಿ ನವನೀತ್  ಕಾಮತ್ ಮತ್ತು  ಸಾಜನ್  ಸಮದ್ ಅವರ ತಂಡ ಎದುರಾಳಿ ಭಟ್ಕಳ ತಂಡದ ವಿರುದ್ದ 2-0 ಸೊನ್ನೆ ಅಂತರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿತು.

ನವನೀತ್ ಕಾಮತ್ ಈತನು ನಗರದ ಉದ್ಯಮಿ ನವೀನ್ ಕಾಮತ್ ಮತ್ತು‌ ನಿವೇದಿತಾ ಕಾಮತ್ ದಂಪತಿಗಳ ಸುಪುತ್ರನಾಗಿದ್ದಾನೆ. ಸಾಜನ್ ಸಮದ್ ಈತನು ಪ್ರವಾಸೋದ್ಯಮಿ ಗಣೇಶಗುಡಿಯ ನಿವಾಸಿ ಸೈಯದ್ ಸಮದ್ ಮತ್ತು ಫಾತಿಮಾ ದಂಪತಿಗಳ ಪುತ್ರನಾಗಿದ್ದಾನೆ.

300x250 AD

ಇವರ ಸಾಧನೆಗೆ ದಾಂಡೇಲಿ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಬಂಗೂರುನಗರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಆಶಾಲತಾ ಜೈನ್, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪ್ರಕಾಶ್ ಮೇಹ್ತಾ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top