Slide
Slide
Slide
previous arrow
next arrow

ಕಳವೆ ಮಂಜುನಾಥ ಭಟ್ ನಿಧನ; ಸಂತಾಪ ಸೂಚಕ ಸಭೆ

300x250 AD

ಶಿರಸಿ: ತಾಲೂಕಿನ ಕಳವೆ ಹಿರಿಯ ಸಾಮಾಜಿಕ ಕಾರ್ಯಕರ್ತರು, ಕೃಷಿಕರಾಗಿ ಇತ್ತೀಚಿಗೆ ಅಗಲಿದ ದಿ.ಮಂಜುನಾಥ ಸುಬ್ರಾಯ ಭಟ್ಟ ಕಳವೆಯವರ ಗೌರವಾರ್ಥ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಆ.22, ಗುರುವಾರ ಸಂತಾಪ ಸೂಚಕ ಸಭೆ ನಡೆಯಿತು. ಗ್ರಾಮಸ್ಥರು, ಒಡನಾಡಿಗಳು ಭಾಗವಹಿಸಿದ್ದರು.

ಕಳವೆ ಊರಿನ ಸಾರ್ವಜನಿಕ ರಸ್ತೆ, ದೇಗುಲ ಸೇರಿದಂತೆ ಅನೇಕ ಕಾರ್ಯಗಳಲ್ಲಿ ದುಡಿಯುತ್ತ , ಅನಾರೋಗ್ಯದಲ್ಲಿದ್ದವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಗಳಲ್ಲಿ ಸದಾ ಮಂಜುನಾಥ ಭಟ್ಟ ಮುಂಚೂಣಿಯಲ್ಲಿ ಭಾಗಿಯಾಗುತ್ತಿದ್ದರೆಂದು ಒಡನಾಟದ ನೆನಪುಗಳನ್ನು ಬರಹಗಾರ ಶಿವಾನಂದ ಕಳವೆ ಈ ಸಂದರ್ಭದಲ್ಲಿ ಹಂಚಿಕೊಂಡರು. ಕಿರಿಯರಿಗೆ ಮಾರ್ಗದರ್ಶಕರಾಗಿದ್ದ ಅವರ ಅಗಲಿಕೆ ಇಡೀ ಗ್ರಾಮಕ್ಕಾದ ಅಪಾರ ನಷ್ಟವೆಂದರು.

300x250 AD

ತೆರಿಗೆ ಸಲಹೆಗಾರ ಎಸ್.ಎಂ.ಭಟ್ ಯಲ್ಲಾಪುರ, ಧಾರವಾಡ ಮೇವು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಶ್ರೀಧರ, ಮೃತರ ಸಹೋದರ ಶ್ರೀಕಾಂತ ಭಟ್ಟ, ಈರಾ ಗೌಡ, ಶ್ರೀಧರ್ ಭಟ್ ಕಳವೆ ಸಭೆಯನ್ನುದ್ದೇಶಿಸಿ ಮಾತಾಡಿದರು. ಗ್ರಾಮದ ಹಿರಿಯರಾದ ಚಂದ್ರಶೇಖರ ಹೆಗಡೆ ಹೂಡ್ಲಮನೆ, ನರಸಿಂಹ ಭಟ್ಟ, ಮಧುಕೇಶ್ವರ ಭಟ್ಟ, ಮಾಬ್ಲೇಶ್ವರ್ ಭಟ್ಟ , ನಾಗರಾಜ್ ಭಟ್ಟ , ರಮೇಶ್ ಭಟ್ಟ, ಮಹೇಶ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನರಸಿಂಹ ದೀಕ್ಷಿತ್ ಸ್ವಾಗತಿಸಿದರು, ರಾಜೇಶ ಭಟ್ ವಂದಿಸಿದರು.

Share This
300x250 AD
300x250 AD
300x250 AD
Back to top