Slide
Slide
Slide
previous arrow
next arrow

ದ್ವಿಚಕ್ರ ವಾಹನ‌ ಸವಾರನ ಮೇಲೆ ಹಲ್ಲೆ: ನಗದು ದೋಚಿದ ಕಳ್ಳರು

300x250 AD

ಬನವಾಸಿ: ಅಪರಿಚಿತರು ದ್ವಿಚಕ್ರ ಸವಾರನಿಗೆ ಥಳಿಸಿ ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ಶನಿವಾರ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಶಿರಸಿ-ಹಾವೇರಿ ರಸ್ತೆಯ ಕಾಳಂಗಿ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ. ಶಿರಸಿ ತಾಲೂಕಿನ ದೇವಿಕೆರೆ ನಿವಾಸಿಯಾದ ರಾಜು ನಾಗಪ್ಪ ಬಾಸೂರು ಎಂಬುವವರು ಶಿರಸಿ-ಹಾವೇರಿ ರಸ್ತೆಯಲ್ಲಿ ಸಾಗುತ್ತಿರುವಾಗ ಕಾಳಂಗಿ ಕ್ರಾಸ್ ಬಳಿ ನಾಲ್ಕು ಜನ ಅಪರಿಚಿತರು ಬಿದ್ದಿರುವ ಬೈಕ್ ಎತ್ತಿ ನಿಲ್ಲಿಸುತ್ತಿರುವುದನ್ನು ಗಮನಿಸಿ ಅಪಘಾತ ಸಂಭವಿಸಿರಬೇಕೆಂದು ಭಾವಿಸಿ ವಿಚಾರಿಸುವಾಗ ಡಕಾಯಿತರ ಗುಂಪು ಬೈಕ್ ಸವಾರನಿಗೆ ಹಲ್ಲೆ ನಡೆಸಿ ಆತನ ಬಳಿ ಇದ್ದ 5200 ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬನವಾಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬನವಾಸಿ ಪೋಲಿಸ್ ಠಾಣೆಯ ಪಿಎಸ್ಐ ಯಲ್ಲಾಲಿಂಗ ಕುನ್ನೂರ ಭೇಟಿ ತನಿಖೆಕೈಗೊಂಡಿದ್ದಾರೆ.

300x250 AD

Share This
300x250 AD
300x250 AD
300x250 AD
Back to top