Slide
Slide
Slide
previous arrow
next arrow

ಸೇಫ್ ಸ್ಟಾರ್ ಸೌಹಾರ್ದದಿಂದ ಹಣಕಾಸು ನೆರವು

300x250 AD

ಹೊನ್ನಾವರ: ಜಿಲ್ಲೆಯ ಪ್ರತಿಷ್ಠಿತ ಸಂಸ್ಥೆಯಾದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪ್ರಧಾನ ಕಛೇರಿ ಹೊನ್ನಾವರ(ಉ.ಕ) ಉತ್ತರಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಸೇರಿ ಒಟ್ಟೂ 17 ಶಾಖೆಗಳನ್ನು ಒಳಗೊಂಡಿರುತ್ತದೆ. ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರ ಶಾಖಾ ವ್ಯಾಪ್ತಿಯಲ್ಲಿ ಮೃತ ಸದಸ್ಯರಾದ ಜಾನಕಿ ಈಶ್ವರ ಅನಿಲಗೋಡ ರೂ.50000/-,ಸುಶೀಲಾ ಶಂಕರ ಹರಿಕಾಂತ ರೂ.50000/-, ಕಮಲಾ ನಾರಾಯಣ ಮುಕ್ತಿ ರೂ.50000/- ರಂತೆ ಒಟ್ಟೂ ರೂ.150,000/- ಮರಣೋತ್ತರ ಪರಿಹಾರವನ್ನು ಅವರ ವಾರಸುದಾರರಿಗೆ ವಿತರಿಸಲಾಯಿತು.

ಹೀಗೆ ಸಹಕಾರಿಯು ಮೃತ ಸದಸ್ಯರ ಕುಟುಂಬ ಸದಸ್ಯರಿಗೆ ಪರಿಹಾರ ರೂಪದಲ್ಲಿ ಸಾಂತ್ವನ ನೀಡಿ ಆರ್ಥಿಕ ನೆರವು ನೀಡಿದೆ. ಈ ಹಿಂದಿನಿಂದಲೂ ಸಹಕಾರಿಯು ಅನೇಕ ಮೃತ ಸದಸ್ಯರ ಕುಟುಂಬಕ್ಕೆ ಹೀಗೆ ಮರಣೋತ್ತರ ಪರಿಹಾರ ನೀಡುತ್ತಾ ಬಂದಿದ್ದು, ಕೇವಲ ಲಾಭ ಮಾತ್ರ ಗುರಿಯನ್ನಾಗಿಸದೇ ಸೇವೆಯೂ ಅತಿ ಪ್ರಮುಖವಾದುದು ಎಂದು ಇನ್ನೊಮ್ಮೆ ಸಾಬೀತುಪಡಿಸಿದೆ. ಈ ಸಂದರ್ಭದಲ್ಲಿ ಶಾಖೆಯ ಬಿಡಿಸಿ ಅಧ್ಯಕ್ಷರು ಶ್ರೀ ಲೀಪರ್ಡ ರೊಡ್ರಿಗ್, ಶಾಖಾ ವ್ಯವಸ್ಥಾಪಕ ರವಿ ಶೆಟ್ಟಿ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top