Slide
Slide
Slide
previous arrow
next arrow

ಜೂ.28ಕ್ಕೆ ಗೋವಾಕ್ಕೆ ‘ಸ್ವರ್ಣಪಾದುಕೆ’

300x250 AD

ಶಿರಸಿ : ಶ್ರೀರಾಮಚಂದ್ರಾಪುರಮಠದ  ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸ್ವರ್ಣಪಾದುಕೆಗಳು ಜೂನ್ 28ರಂದು ಗೋವಾಕ್ಕೆ ಆಗಮಿಸಲಿದ್ದು , ಜೂ.29ರಂದು ಮಡಗಾಂವ್ ಸಮೀಪದ ದವರ್ಲಿಯ ಶ್ರೀ ಸಿದ್ಧದತ್ತಮಂದಿರಕ್ಕೆ ಆಗಮಿಸಲಿರುವ ಸ್ವರ್ಣ ಪಾದುಕೆಗಳ ಧೂಲೀಪೂಜೆ ವಲಯದ ವತಿಯಿಂದ ನಡೆಯಲಿದೆ. ಜೂ30 ರಂದು ಗೋವಾ ವಲಯದ ಸಮಸ್ತ ಶಿಷ್ಯವೃಂದ ಹಾಗೂ ಭಕ್ತರ ವತಿಯಿಂದ ಪಾದುಕಾಪೂಜೆ ಹಾಗೂ ಭಿಕ್ಷಾಸೇವೆ ನೆರವೇರಲಿದೆ.

ಇದೇ ಸಂದರ್ಭದಲ್ಲಿ  ಗೋವಾ ಹವ್ಯಕ ವಲಯದ ವಾರ್ಷಿಕೋತ್ಸವ, ಸನ್ಮಾನ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮ ನಡೆಯಲಿವೆ. ಇತ್ತೀಚೆಗೆ ಹೊಂದಿದ ಶಿರೋಡಾ ಉಚ್ಚಮಾಧ್ಯಮಿಕ ವಿದ್ಯಾಲಯದ ಪ್ರಾಚಾರ್ಯ ಪದವಿಯಿಂದ ಸೇವಾನಿವೃತ್ತಿಯನ್ನು ಹೊಂದಿದ ವಲಯದ ಉಪಾಧ್ಯಕ್ಷ ಈಶ್ವರ ಕೆ. ಹೆಗಡೆ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಲಿದೆ. ಮಧ್ಯಾಹ್ನ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರದ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಲಯದ ಅಧ್ಯಕ್ಷ ಮಹಾಬಲ ಭಟ್ಟ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top