Slide
Slide
Slide
previous arrow
next arrow

ಶ್ರೀ ಹರಿದರ್ಶನ ತಾಳಮದ್ದಲೆ ಯಶಸ್ವಿ

300x250 AD

ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರಿಂದ ಸಿದ್ದಾಪುರ ತಾಲೂಕು ಬಾಳೇಸರ ಶ್ರೀಕಾಂತ ಮಾ. ಹೆಗಡೆ ಇವರ ಮನೆಯಲ್ಲಿ ನಡೆಸಿದ ದೇವತಾ ಆರಾಧನೆಯ ಕಾರ್ಯಕ್ರಮದ ಅಂಗವಾಗಿ ಜೂ.6, ಗುರುವಾರ ಶ್ರೀ ಹರಿದರ್ಶನ (ಧರ್ಮಾಂಗದ) ಎಂಬ ಯಕ್ಷಗಾನ ತಾಳಮದ್ದಲೆಯನ್ನು ಪ್ರದರ್ಶಿಸಲಾಯಿತು.

ಹಿಮ್ಮೇಳನದಲ್ಲಿ ಆದರ್ಶ ಭಾಗವತ್ ಮಾರುತಿಪುರ, ಗಣಪತಿ ಹೆಗಡೆ ಹೊನ್ನೆಕೈ, ಲಕ್ಷ್ಮಿನಾರಾಯಣ ಭಟ್ಟ ಮೊಗೆಹಳ್ಳ, ಇವರುಗಳು ಉತ್ತಮವಾಗಿ ಸಾಥ್ ನೀಡಿದರು. ಮುಮ್ಮೇಳನದಲ್ಲಿ ಶ್ರೀಧರ ಭಟ್ಟ ಗಡಿಹಿತ್ಲು, ತಿಮ್ಮಪ್ಪ ಭಟ್ಟ ಸಾರಂಗ ದೊಡ್ಮನೆ, ಟಿ.ಎ.ಹೆಗಡೆ ಬಾನಬ್ಬಿ, ಮಾಧವ ಶರ್ಮಾ ಕಲಗಾರ, ಶಂಕರ ನಾರಾಯಣ ಹೆಗಡೆ ದಾನಮಾಂವ, ಕೇಶವ ಹೆಗಡೆ ಕಿಬ್ಳೆ, ಇವರುಗಳು ಉತ್ತಮವಾಗಿ ಪ್ರದರ್ಶನ ನೀಡಿದರು ಈಶ್ವರ ನಾಯ್ಕ ಬಿರ್ಲಮಕ್ಕಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಸಹಕರಿಸಿದರು. ಟಿ.ಎ.ಹೆಗಡೆ ಬಾನಬ್ಬಿ ಸ್ವಾಗತಿಸಿದರು, ಶ್ರೀಕಾಂತ ಮಾ. ಹೆಗಡೆ ಬಾಳೇಸರ ಸಹಕರಿಸಿರು, ಕೇಶವ ಹೆಗಡೆ ಕಿಬ್ಳೆ ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top