Slide
Slide
Slide
previous arrow
next arrow

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಮೋಹನ ಹಲವಾಯಿಗೆ ಸನ್ಮಾನ

300x250 AD

ದಾಂಡೇಲಿ: ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡ ನಗರ ಸಭೆಯ ಸದಸ್ಯರಾದ ಮೋಹನ‌ ಹಲವಾಯಿಯವರನ್ನು ನಗರದ ಎವರಗ್ರೀನ್ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಸನ್ಮಾನಿಸಿ, ಅಭಿನಂದಿಸಿದರು.

ಮೋಹನ್ ಹಲವಾಯಿಯವರನ್ನು ಸನ್ಮಾನಿಸಿ ಮಾತನಾಡಿದ ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಾಬಾಸಾಬ್ ಜಮಾದಾರ್ ಅವರು ಆಟೋ ಚಾಲಕರ ಸಂಘಟನೆಯ ಜೊತೆ ವಿಶೇಷವಾದ ಪ್ರೀತಿ ಅಭಿಮಾನವನ್ನು ಮೋಹನ ಹಲವಾಯಿಯವರು ಇಟ್ಟುಕೊಂಡಿದ್ದಾರೆ. ನಮ್ಮ ಅಟೋ ನಿಲ್ದಾಣಕ್ಕೆ ಕಾಗದ ಕಾರ್ಖಾನೆಯಿಂದ ಅಗತ್ಯ ಬೇಕಾದ ಮೂಲ ಸೌಕರ್ಯವನ್ನು ಒದಗಿಸಿ ಕೊಟ್ಟು, ಸುಸಜ್ಜಿತ ಆಟೋ ನಿಲ್ದಾಣವನ್ನಾಗಿಸುವಲ್ಲಿ ಮೋಹನ‌ ಹಲವಾಯಿಯವರು ಕಾಗದ ಕಾರ್ಖಾನೆ ಮತ್ತು ಆಟೋ ಚಾಲಕರಿಗೆ ಸಂಪರ್ಕದ ಸೇತುವೆಯಾಗಿ ಕೆಲಸ ನಿರ್ವಹಿಸುವುದನ್ನು ನಾವು ಸದಾ ಸ್ಮರಿಸಿಕೊಳ್ಳುತ್ತೇವೆ. ಮೋಹನ‌ ಹಲವಾಯಿಯವರಿಗೆ ಇನ್ನಷ್ಟು ಸ್ಥಾನಮಾನಗಳು ಸಿಗುವಂತಾಗಲಿ ಎಂದು ಶುಭವನ್ನು ಹಾರೈಸಿದರು.

ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದ ಮೋಹನ ಹಲವಾಯಿಯವರು ದಾಂಡೇಲಿಯ ಆಟೋ ಚಾಲಕರು ನಿಜವಾಗಿಯೂ ಮಾನವೀಯ ಅಂತಃಕರಣವನ್ನು ಮೈಗೂಡಿಸಿಕೊಂಡಿದ್ದಾರೆ. ಶ್ರಮವಹಿಸಿ ಬದುಕು ನಡೆಸುವುದರ ಜೊತೆಯಲ್ಲಿ ಸಾಮಾಜಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದಾಂಡೇಲಿಯ ಆಟೋ ಚಾಲಕರ ಸೇವಾ ಮನೋಭಾವನೆ ಮತ್ತು ಕರ್ತವ್ಯ ಬದ್ದತೆ ಶ್ಲಾಘನೀಯವಾಗಿದೆ ಎಂದರು.

300x250 AD

ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಅನಿಲ್ ದಂಡಗಲ್, ನಗರಸಭೆಯ ಮಾಜಿ ಸದಸ್ಯರಾದ ಕೀರ್ತಿ ಗಾಂವಕರ‌ ಹಾಗೂ ಎವರಗ್ರೀನ್ ಆಟೋ ನಿಲ್ದಾಣದ ಆಟೋ ಚಾಲಕರು ಮತ್ತು ಆಟೋ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top