Slide
Slide
Slide
previous arrow
next arrow

ಮಾ.13ಕ್ಕೆ ಚಂದ್ರಹಾಸ ಹುಡಗೋಡ ಸ್ಮರಣಾರ್ಥ ‘ಕಲಾಶ್ರೀ’ ಪ್ರಶಸ್ತಿ ಪ್ರದಾನ

300x250 AD

ಹೊನ್ನಾವರ : ಖ್ಯಾತ ಯಕ್ಷಗಾನ ಕಲಾವಿದ ದಿ. ಚಂದ್ರಹಾಸ ನಾಯ್ಕ ಹುಡಗೋಡ ಇವರ ಸ್ಮರಣಾರ್ಥ ಪ್ರತೀವರ್ಷ ಕಲಾಶ್ರೀ ಪ್ರಶಸ್ತಿಯನ್ನು ಹಿರಿಯ ಕಲಾವಿದರಿಗೆ ನೀಡುವುದರ ಜೊತೆ ಯಕ್ಷಗಾನ ಕಾರ್ಯಕ್ರಮವನ್ನು ಏರ್ಪಡಿಸಿ ಗೌರವ ಸಲ್ಲಿಸುತ್ತಿದ್ದು, ಈ ಬಾರಿ ಶ್ರೀಧರ ಹೆಗಡೆ ಚಪ್ಪರಮನೆ ಇವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನವಾಗಲಿದೆ.

ಮಾ.13ರಂದು ಬುಧವಾರ ಸಂಜೆ 6ಗಂಟೆಗೆ ಮೂಡಗಣಪತಿ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವೈದ್ಯ, ಹವ್ಯಾಸಿ ಯಕ್ಷಗಾನ ಕಲಾವಿದ ಡಾ.ಪ್ರಕಾಶ ನಾಯ್ಕ ಮತ್ತು ಪ್ರಸಿದ್ಧ ಯಕ್ಷತಾರೆ ಶ್ರೀಮತಿ ಅಶ್ವಿನಿ ಕೊಂಡದಕುಳಿ ಇವರನ್ನೊಳಗೊಂಡು ‘ಶ್ಯಮಂತಕಮಣಿ’ ಯಕ್ಷಗಾನ ಪ್ರದರ್ಶನವಿದೆ. ಯಕ್ಷಗಾನ ಪ್ರಿಯರು, ತಮ್ಮ ತಂದೆಯವರ ಅಭಿಮಾನಿಗಳು ಆಗಮಿಸಬೇಕೆಂದು ಪ್ರದೀಪ ಹುಡುಗೋಡ ವಿನಂತಿ ಮಾಡಿಕೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top