Slide
Slide
Slide
previous arrow
next arrow

ಅಗಲಿದ ಬಾಲಚಂದ್ರ ನಾಯಕರಿಗೆ ಅಗಸೂರಿನಲ್ಲಿ ಶ್ರದ್ಧಾಂಜಲಿ

300x250 AD

ಅಂಕೋಲಾ: ಬಾಲಚಂದ್ರ ನಾಯಕ ಒಬ್ಬ ವ್ಯಕ್ತಿಯಲ್ಲ.
ಅವರೊಬ್ಬ ಶಕ್ತಿಯಾಗಿದ್ದರು. ನಮ್ಮ ಅಗಸೂರು ಗ್ರಾಪಂ ಅಧ್ಯಕ್ಷರಾಗಿ ಸದಸ್ಯರಾಗಿ ಹಲವಾರು ವಿದಾಯಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಾಲಚಂದ್ರ ನಾಯಕರವರ ಅಗಲುವಿಕೆಯನ್ನು ಸಹಿಸಲಾಗುತ್ತಿಲ್ಲ ಎಂದು ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ ಹೇಳಿದರು.

ಅಗಸೂರು ಗ್ರಾಪಂ ಕಾರ್ಯಾಲಯದಲ್ಲಿ ನಡೆದ ಬಾಲಚಂದ್ರ ನಾಯಕರವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಪಂ ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ನಾಯ್ಕ್ ಮಾತನಾಡಿ ಬಾಲಚಂದ್ರ ನಾಯಕರವರು ಕೇವಲ ಗ್ರಾಪಂ ಅಧ್ಯಕ್ಷರಾಗಿರದೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ವಿಶೇಷವಾಗಿ ತೊಡಗಿಸಿಕೊಂಡಿದ್ದರು. ನಮ್ಮೂರಿಗೆ ಕಿರೀಟ ಪ್ರಾಯರಾಗಿದ್ದರು. ಯಾವುದೇ ಸಮಸ್ಯೆಗಳಿದ್ದರೂ ಸಹಕರಿಸುವ ಔದಾರ್ಯದ ಗುಣವನ್ನು ಹೊಂದಿರುವ ಬಾಲಚಂದ್ರ ನಾಯಕರವರ ನಿಧನ ಈ ಸಮಾಜಕ್ಕೆ ಬಹುದೊಡ್ಡ ನಷ್ಟ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಸರೋಜಾ ನಾಯಕ,ಕಾರ್ಯದರ್ಶಿ ಅನ್ನಪೂರ್ಣಾ,ಪ್ರಮುಖರಾದ ತುಳಸು ಗೌಡ, ಆನಂದು ಗೌಡ, ಮಂಜುಳಾ ವೆರ್ಣೇಕರ , ರವಿ ನಾಯಕ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top