Slide
Slide
Slide
previous arrow
next arrow

ಕುಗ್ರಾಮಗಳಿಗೆ ಸಾರಿಗೆ ಬಸ್ ಸಂಪರ್ಕ,ರಸ್ತೆ,ಸೇತುವೆ ನಿರ್ಮಾಣಕ್ಕೆ ಆಗ್ರಹ

300x250 AD

ಜೋಯಿಡಾ: ತಾಲ್ಲೂಕಿನ ಕುಗ್ರಾಮಗಳಾದ ತೇರಾಳಿ ಮಾರ್ಗವಾಗಿ ಡಿಗ್ಗಿ ಮತ್ತು ಕುಂಡಲ್ ಗ್ರಾಮಗಳಿಗೆ ಸಾರಿಗೆ ಬಸ್ ಹಾಗೂ ಕುಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ರಸ್ತೆ ಸೇತುವೆ ನಿರ್ಮಾಣ ಮತ್ತು ದುರಸ್ತಿ ಕಾರ್ಯಕ್ಕೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ  ಜೋಯಿಡಾ ತಾಲೂಕು ಕರ್ನಾಟಕ‌ ಪ್ರಾಂತ ರೈತ ಸಂಘದಿಂದ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಮಂಜುನಾಥ್ ಮುನ್ನಳ್ಳಿಯವರಿಗೆ ಮಂಗಳವಾರ ಲಿಖಿತ ಮನವಿಯನ್ನು ನೀಡಲಾಯಿತು.

ಗಡಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟವನ್ನು ಮಾಡಲಾಗಿತ್ತು.‌ ಬಹುಮುಖ್ಯವಾಗಿ ತೆರಾಳಿ ಮಾರ್ಗವಾಗಿ ಡಿಗ್ಗಿ‌ ಮತ್ತು ಕುಂಡಲ್ ಗ್ರಾಮಕ್ಕೆ ಸಾರಿಗೆ ಬಸ್ ಸಂಪರ್ಕವನ್ನು ಕಲ್ಪಿಸಬೇಕು ಹಾಗೂ ತೆರಾಳಿಯಿಂದ ಡಿಗ್ಗಿಯವರೆಗೆ ರಸ್ತೆ ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಕುಗ್ರಾಮಗಳಿಗೆ ಅತಿ ಅವಶ್ಯವಾಗಿ ಬೇಕಾಗಿರುವ ಸೇತುವೆ ದುರಸ್ತಿ ಮತ್ತು ನಿರ್ಮಾಣ ಕಾರ್ಯಕ್ಕೆ ತ್ವರಿತಗತಿಯಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಿಒಐ(ಎಂ) ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ಡಿ.ಸ್ಯಾಮಸನ್, ಕರ್ನಾಟಕ ಪ್ರಾಂತ ರೈತ ಸಂಘದ ಜೋಯಿಡಾ ತಾಲೂಕು ಕಾರ್ಯದರ್ಶಿ ರಾಜೇಶ್ ಗಾವಡಾ, ಪ್ರಮುಖರಾದ ಉಮೇಶ್ ವೆಳಿಪ್, ದಿಗಂಬರ್ ದೇಸಾಯಿ, ಸಂಪತ್, ಆಸೀಪ್ ತಾಟವಾಳೆ, ಸುಭಾಷ್ ವೆಳಿಪ್, ದೇವದಾಸ್ ಮಿರಾಶಿ, ಪ್ರಕಾಶ್ ಮಿರಾಶಿ‌ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top