Slide
Slide
Slide
previous arrow
next arrow

‘ಸೌರಭ’ಕ್ಕೆ ಶ್ರೀಕಾಂತ ಭಟ್ಟ ಸಾರಥ್ಯ : ಅರುಣ ಹೆಗಡೆ ಪ್ರಧಾನ ಕಾರ್ಯದರ್ಶಿ

300x250 AD

ಕುಮಟಾ : ನಾಡಿನ ಅಗ್ರಗಣ್ಯ ಸಾಂಸ್ಕೃತಿಕ ಸಂಸ್ಥೆ, ಇಲ್ಲಿನ ಸದಭಿರುಚಿಯ ಸಾಂಸ್ಕೃತಿಕ ಸಂಗಮ ‘ಸೌರಭ’ಕ್ಕೆ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ತರಂಗ ಸಂಸ್ಥೆಯ ಸಂಸ್ಥಾಪಕ, ಸಾಂಸ್ಕೃತಿಕ ಆಸಕ್ತ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಶ್ರೀಕಾಂತ ಭಟ್ಟ ತುಂಬಲೇಮಠ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಶಿಕ್ಷಣ ತಜ್ಞ, ಸಾಂಸ್ಕೃತಿಕ ಸಂಯೋಜಕ, ನಿರೂಪಕ, ನಿವೃತ್ತ ಪ್ರಾಚಾರ್ಯ ಅರುಣ ಹೆಗಡೆ, ಮಾನೀರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಮತ್ತು ಈ ವರ್ಷ ಸೌರಭದ ರಜತ ಮಹೋತ್ಸವದ ಆಚರಣೆ ಹಮ್ಮಿಕೊಳ್ಳಲಾಗುವದು ಎಂದು ಸೌರಭದ ಪ್ರಕಟಣೆ ತಿಳಿಸಿದೆ.

1996 ರಲ್ಲಿ ಆರಂಭವಾದ ಸೌರಭ ಗುಣಾತ್ಮಕ ಕಾರ್ಯಕ್ರಮಗಳ ಮಹಾ ಅಲೆಯನ್ನೇ ಹುಟ್ಟು ಹಾಕಿ ನಾಡಿನಾದ್ಯಂತ ಸಾಂಸ್ಕೃತಿಕ ಆಂದೋಲನವನ್ನೇ ಮಾಡಿತ್ತು. ಉದಯೋನ್ಮುಖರಿಗೂ ಅವಕಾಶ, ಸಾಧಕರಿಗೂ ಸವಾಲು, ಸಮಯಪ್ರಜ್ಞೆಯ ಹಿತವಾದ ಸಭಾ ಕಾರ್ಯಕ್ರಮದ ಜೊತೆಗೆ ಪ್ರಾಯೋಜಕರನ್ನು ವಿಶೇಷವಾಗಿ ಪರಿಚಯಿಸಿ ಗೌರವಿಸುವ ನೂತನ ಆವಿಷ್ಕಾರಗಳು ಸೌರಭದ ಕೊಡುಗೆಗಳಾಗಿವೆ. ಸುಮಾರು ಎರಡೂವರೆ ದಶಕಗಳ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ಯಕ್ಷಗಾನ ವನ್ನು ಜೊತೆ ಜೊತೆಗೆ ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸಿದ ಕಾರ್ಯ ಈಗಲೂ ಎಲ್ಲೆಡೆ ಸ್ಮರಿಸಲಾಗುತ್ತಿದೆ . ಈಗ ಮತ್ತೆ ಸೌರಭ ತನ್ನ ಘನತೆಯೊಂದಿಗೆ ಹೊಸ ಹೊಸ ಸಾಂಸ್ಕೃತಿಕ ಸಾಧ್ಯತೆಗಳನ್ನು ಲೋಕಕ್ಕೆ ನೀಡಬೇಕಾಗಿದೆ. ರಾಜ್ಯಾದ್ಯಂತ ತನ್ನದೇ ವಿಶೇಷ ಹಾಗೂ ಸುಸಂಸ್ಕೃತ ಸಾಂಸ್ಕೃತಿಕ ಬಳಗವನ್ನು ಸೌರಭ ಹೊಂದಿದೆ. ಇತ್ತೀಚೆಗೆ ನಿಧನರಾದ ಖ್ಯಾತ ತೆರಿಗೆ ಸಲಹೆಗಾರರಾದ ಎಂ.ಕೆ.ಹೆಗಡೆ, ಕೂಜಳ್ಳಿಯವರು ಸಹ ಸೌರಭದ ಸಂಸ್ಥಾಪಕ ನಿರ್ದೇಶಕರಾಗಿದ್ದರು.

300x250 AD

ಸೌರಭದ ನೂತನ ಪದಾಧಿಕಾರಿಗಳು ಹೀಗಿದ್ದಾರೆ:

ಅಧ್ಯಕ್ಷರಾಗಿ ಶ್ರೀಕಾಂತ ಭಟ್ಟ, ತುಂಬಲೇಮಠ, ಉಪಾಧ್ಯಕ್ಷರಾಗಿ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಅರುಣ ಹೆಗಡೆ, ಮಾನೀರು, ಕೋಶಾಧ್ಯಕ್ಷರಾಗಿ ಎಸ್. ವಿ. ಹೆಗಡೆ, ನಂದಯ್ಯನ್,
ಸಹಕಾರ್ಯದರ್ಶಿಯಾಗಿ ವಿನಾಯಕ ಹೆಗಡೆಕಟ್ಟೆ
ನಿರ್ದೇಶಕರುಗಳಾಗಿ ಡಾ. ಅನಿಲ ಹೆಗಡೆ, ಜಯಂತ ಮಂಕಿಕರ್, ಡಿ.ಜಿ. ಹೆಗಡೆ ಬಡಗಣಿ, ಕಿರಣ ಭಟ್ಟ ಹೊನ್ನಾವರ, ಗಣೇಶ ಜೋಶಿ ಸಂಕೊಳ್ಳಿ ಆಯ್ಕೆಯಾಗಿದ್ದಾರೆ.

Share This
300x250 AD
300x250 AD
300x250 AD
Back to top