ಶಿರಸಿ: ತಾಲೂಕಿನ ಕಾನಗೊಡ-ಕಬ್ನಳ್ಳಿ ಕ್ರಾಸ್ನಲ್ಲಿರುವ ಬೀರಪ್ಪ ದೇವರ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕಲಾ ಸಂಕೋಚದಿಂದ ಸಂಪನ್ನವಾಯಿತು.
ವಿದ್ವಾನ್ ಕುಮಾರ್ ಭಟ್ ಕೊಳಗಿಬಿಸ್ ಅವರ ಆಚಾರ್ಯತ್ವದಲ್ಲಿ ನಡೆದ ಕಾರ್ಯವು ಒಟ್ಟೂ ಆರು ಜನ ವೈದಿಕರೊಂದಿಗೆ ಹವನ, ಕಲಶಾಭಿಷೇಕ ಮುಂತಾದ ಧಾರ್ಮಿಕ ವಿಧಿವಿಧಾನದೊಂದಿಗೆ ನಡೆದಿದ್ದು ಕಬ್ನಳ್ಳಿ ಹಾಗು ಕಾನಗೊಡ ಮತ್ತು ಸುತ್ತಮುತ್ತಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೀರಪ್ಪ ದೇವರ ವಾರ್ಷಿಕೋತ್ಸವ ಸಂಪನ್ನ
