Slide
Slide
Slide
previous arrow
next arrow

ವಿಸ್ತರಣಾ ನಿರ್ದೇಶಕರಾಗಿ ಲಕ್ಷ್ಮೀನಾರಾಯಣ ಹೆಗಡೆ ಆಯ್ಕೆ

300x250 AD

ಶಿರಸಿ: ಡಾ. ಲಕ್ಷ್ಮಿನಾರಾಯಣ ಹೆಗಡೆ ಇವರು ಇತ್ತೀಚೆಗೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇದರ ವಿಸ್ತರಣಾ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಅವರು ಹಾವೇರಿಯ ದೇವಿಹೊಸೂರಿನಲ್ಲಿರುವ ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ಡೀನ್‌ರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಶಿರಸಿಯ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರಾಗಿ, ತೋಟಗಾರಿಕಾ ಮಹಾವಿದ್ಯಾಲಯದ ಡೀನ್‌ರಾಗಿಯೂ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಇವರು ಶಿರಸಿ ತಾಲೂಕಿನ ಇಸಳೂರು-ಬೊಪ್ಪನಳ್ಳಿಯ ಪ್ರಭಾಕರ ಹೆಗಡೆ ದ್ವಿತೀಯ ಪುತ್ರರಾಗಿದ್ದಾರೆ. ಸದ್ಯದಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯದ ಪ್ರಭಾರಿಯಾಗಿ ಡಾ. ಎನ್. ಕೆ. ಹೆಗಡೆಯವರಾಗಿದ್ದು, ನಮ್ಮ ಜಿಲ್ಲೆಯ ಇಬ್ಬರು ವಿಶ್ವ ವಿದ್ಯಾಲಯದ ಉನ್ನತ ಹುದ್ದೆಯಲ್ಲಿರುವುದು ಅಪರೂಪದ ಮತ್ತು ಹೆಮ್ಮೆಯ ವಿಷಯವಾಗಿದೆ

300x250 AD
Share This
300x250 AD
300x250 AD
300x250 AD
Back to top