Slide
Slide
Slide
previous arrow
next arrow

ಜ.27ಕ್ಕೆ ನಾವು ನಮ್ಮಿಷ್ಟ ಸ್ನೇಹ ಸಮ್ಮೇಳನ

300x250 AD

ಶಿರಸಿ: ನಾವು ನಮ್ಮಿಷ್ಟ ಫೇಸ್ ಬುಕ್ ಬಳಗದ ವಾರ್ಷಿಕ ಸ್ನೇಹ ಸಮ್ಮೇಳನ ನಗರದ ತೋಟಗಾರ ಕಲ್ಯಾಣ‌ ಮಂಟಪದಲ್ಲಿ ಜ.27, ಶನಿವಾರ ನಡೆಯಲಿದೆ. ಕಳೆದ ಹನ್ನೆರಡು ವರ್ಷದಿಂದ ಸಾಮಾಜಿಕ ಜಾಲ ತಾಣ ಬಳಸಿಕೊಂಡು ಒಂದು ಆತ್ಮೀಯ ನೆಲೆಗಟ್ಟಿನಲ್ಲಿ ಹಲವು ಪ್ರತಿಭೆಗಳಿಗೆ ವೇದಿಕೆಯ ನಾವು‌ ನಮ್ಮಿಷ್ಟ ಬಳಗದ ಹನ್ನೊಂದನೇ‌ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಬೆಳಿಗ್ಗೆ 9 ರಿಂದ ಸಂಜೆ 6 ರ ತನಕ ನಡೆಯಲಿದೆ.

ಸಮಾವೇಶಕ್ಕೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್, ಜೀವ ಜಲ‌ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಶ್ರೀಕುಮಾರದ ಮುಖ್ಯಸ್ಥ ವೆಂಟಕರಮಣ‌ ಹೆಗಡೆ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ,‌ ಲೇಖಕಿ ಶುಭಾ‌ ನಾಗರಾಜ, ಸಾಮಾಜಿಕ ಪ್ರಮುಖ‌ ಶ್ರೀಕಾಂತ ಭಟ್ಟ ಅಪೋಲೋ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಗ್ರುಪ್ ಎಡ್ಮಿನ್’ಗಳಾದ ಸೂರ್ಯನಾರಾಯಣ ಹೆಗಡೆ ಕಡತೋಕ, ಸಾವಿತ್ರಿ ರಮೇಶ ತಿಳಿಸಿದ್ದಾರೆ. ಒಂದು‌ ಸಾಮಾಜಿಕ ಜಾಲ‌ತಾಣ ಒಂದು‌ ಸಾಂಘಿಕ‌‌ ಶಕ್ತಿಯಾಗಿ ಹೇಗೆ ತೊಡಗಿಕೊಳ್ಳಬಹುದು ಎಂಬುದಕ್ಕೆ ‌ಬಳಗ ಅನೇಕ‌ ಕಾರ್ಯ ಮಾಡಿದೆ‌. ಈ ಬಳಗದಿಂದ‌ ಈವರೆಗೆ ಅನೇಕ ಸಾಧಕರಿಗೆ ಸಮ್ಮಾನ, ಎಳೆಯ‌ ಪ್ರತಿಭೆಗಳಿಗೆ ಪುರಸ್ಕಾರ, ಪ್ರತಿಭೆಗಳಿಗೆ ವೇದಿಕೆ‌ ಆಗಿದ್ದು‌ ಉಲ್ಲೇಖನೀಯ.

300x250 AD
Share This
300x250 AD
300x250 AD
300x250 AD
Back to top