Slide
Slide
Slide
previous arrow
next arrow

ಸಿದ್ದಾಪುರದಲ್ಲಿ ‘ರಾಮೋತ್ಸವ’: ಕಾಗೇರಿ ಭಾಗಿ

300x250 AD

ಸಿದ್ದಾಪುರ: ಅಯೋಧ್ಯೆಯ ರಾಮ ಮಂದಿರದ ಲೋಕಾರ್ಪಣೆಯ ಅಂಗವಾಗಿ ಸೋಮವಾರ ಪಟ್ಟಣದಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗಿಯಾಗಿ ಪೂಜೆ ಸಲ್ಲಿಸಿದರು. ಅವರು ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ, ರಾಜಮಾರ್ಗದಲ್ಲಿ ವರ್ತಕರ ಸಂಘದಿಂದ ನಡೆದ ಕಾರ್ಯಕ್ರಮ, ತಿಮ್ಮಪ್ಪ ನಾಯಕ್ ವೃತ್ತದ ನಾಗರಕಟ್ಟೆಗೆ ತೆರಳಿ ರಾಮಜ್ಯೋತಿ ಬೆಳಗುವ ಮೂಲಕ ರಾಮ ಸ್ಮರಣೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಪ್ರಮುಖರಾದ ಗುರುರಾಜ್ ಶಾನಭಾಗ್, ನಂದನ್ ಬೋರ್ಕರ, ಮಂಜುನಾಥ್ ಭಟ್, ಸುರೇಶ್ ನಾಯ್ಕ ಬಾಲಿಕೊಪ್ಪ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಕಮಿಟಿಯ ಜೈವಂತ್ ಶಾನಭಾಗ್, ಎನ್.ಜಿ.ಕಾಮತ್, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ ಕಮಿಟಿ ಅಧ್ಯಕ್ಷ ಶಾಂತಾರಾಮ್ ಶೇಟ್, ವಿನಾಯಕ್ ಶೇಟ್, ಪ್ರಶಾಂತ್ ಶೇಟ್, ನಾಗರಕಟ್ಟೆ ಕಮಿಟಿಯ ಗಣಪತಿ ನಾಯ್ಕ, ನಾರಾಯಣ ಕೊಂಡ್ಲಿ ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top