Slide
Slide
Slide
previous arrow
next arrow

ಚಿರತೆ ದಾಳಿಗೆ ಆಕಳು ಬಲಿ

300x250 AD

ಹೊನ್ನಾವರ: ತಾಲೂಕಿನ ಜನತೆ ಚಿರತೆ ದಾಳಿಗೆ ಕಂಗೆಟ್ಟು ಹೋಗಿದ್ದು, ಈಗಾಗಲೇ ಬೇರೆ ಬೇರೆ ಕಡೆ ಚಿರತೆ ದಾಳಿಯ ಘಟನೆ ನಡೆದಿರುವ ಬೆನ್ನಲ್ಲೇ ಇನ್ನೊಂದು ಹೃದಯ ವಿದ್ರಾವಕ ಘಟನೆಯಿಂದ ಗ್ರಾಮಸ್ಥರಲ್ಲಿ ಭಯ ದುಪ್ಪಟ್ಟಾಗಿದೆ. ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಹಳಗೇರಿಯ ಮಂಜು ನಾರಾಯಣ ಗೌಡ ಇವರ ಮನೆಯ ಆಕಳು ಚಿರತೆ ದಾಳಿಯಿಂದ ಶುಕ್ರವಾರ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪದೇ ಪದೇ ಚಿರತೆ ದಾಳಿ ಕಾಣಿಸಿಕೊಳ್ಳುತ್ತಿರುವುದು ಭಯ ಹುಟ್ಟಿಸುತ್ತಿದೆ. ಈ ಕಾರಣಕ್ಕೆ ಕಂಗೆಟ್ಟ ಗ್ರಾಮಸ್ಥರು ರಾತ್ರಿ ಸಮಯದಲ್ಲಿ ಜೀವವನ್ನು ಕೈಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಪಂಚಾನಾಮೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top