Slide
Slide
Slide
previous arrow
next arrow

‘ಜ್ಞಾನ ಸಂಜೀವಿನಿ’ ಪ್ರಶಸ್ತಿಗೆ ಅಳ್ಳಂಕಿಯ ಮಹೇಶ ಹೆಗಡೆ ಭಾಜನ

300x250 AD

ಹೊನ್ನಾವರ: ಶಿಕ್ಷಣ ಜ್ಞಾನ ಪತ್ರಿಕೆಯವರು ರಾಜ್ಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ನೀಡುವ ಪ್ರಸಕ್ತ ಸಾಲಿನ ‘ಜ್ಞಾನ ಸಂಜೀವಿನಿ’ ಪುರಸ್ಕಾರಕ್ಕೆ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ಮಹೇಶ ಹೆಗಡೆ ಭಾಜನರಾಗಿದ್ದಾರೆ.

ಪ್ರತಿ ವರ್ಷ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ತರುತ್ತಿರುವುದಲ್ಲದೇ ಕಾಲೇಜಿನ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಮಹೇಶ ಹೆಗಡೆಯವರ ವಿಶೇಷ ಆಸಕ್ತಿ. ಶಿಸ್ತು, ಸೇವೆ, ಸಮಯ ಪಾಲನೆ ಮುಂತಾದ ಗುಣಗಳಿಂದಾಗಿ ಎಲ್ಲ ವಿದ್ಯಾರ್ಥಿಗಳ ಮೆಚ್ಚಿನ ಉಪನ್ಯಾಸಕರಾಗಿದ್ದಾರೆ. ಇವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top