Slide
Slide
Slide
previous arrow
next arrow

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

300x250 AD

ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ಬಾಡ ಗ್ರಾ. ಪಂ.ವ್ಯಾಪ್ತಿಯ ಜ್ಯೇಷ್ಠಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. 2022-23ನೇ ಸಾಲಿನ 5054 ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾದ ಕಾಮಗಾರಿ ಇದಾಗಿದೆ. 75.00ಲಕ್ಷ ರೂ. ಅಂದಾಜು ಮೊತ್ತದಲ್ಲಿ 1ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಬಾಡ ಗ್ರಾ. ಪಂ. ಅಧ್ಯಕ್ಷೆ ಗೀತಾ ನಾಯ್ಕ, ಉಪಾಧ್ಯಕ್ಷ ಮಂಜುನಾಥ್ ನಾಯ್ಕ, ಹೊಲನಗದ್ದೆ ಗ್ರಾ. ಪಂ. ಅಧ್ಯಕ್ಷ ಎಮ್. ಎಮ್. ಹೆಗಡೆ, ಕಾಗಾಲ ಗ್ರಾ. ಪಂ. ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಇ. ಇ. ಮೋಹನ ಪಿ. ನಾಯ್ಕ ಹಾಗೂ ಎ. ಇ. ಇ. ಸೋಮನಾಥ ಭಂಡಾರಿ, ಗ್ರಾ. ಪಂ. ಸದಸ್ಯರುಗಳಾದ ವಿಠ್ಠಲ್ ನಾಯಕ, ಜಯಲಕ್ಷ್ಮಿ ನಾಯ್ಕ, ಸಯ್ಯದ್, ಸುಬ್ರಹ್ಮಣ್ಯ ನಾಯ್ಕ್, ಫಾತಿಮ, ಮಾದೇವಿ ಮುಕ್ರಿ, ಸಾವಿತ್ರಿ ಪಟಗಾರ, ದತ್ತು ಪಟಗಾರ, ಶ್ರೀಕಾಂತ್ ಮಡಿವಾಳ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರಾದ ಜಗನ್ನಾಥ ನಾಯ್ಕ, ಹರೀಶ್ ನಾಯ್ಕ, ಮಹಾಬಲೇಶ್ವರ ನಾಯ್ಕ, ಕಾಮೇಶ್ವರ ಭಟ್, ಚಿದಾನಂದ ಭಂಡಾರಿ ಹಾಗೂ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top