Slide
Slide
Slide
previous arrow
next arrow

ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ದಿನಕರ ಶೆಟ್ಟಿ

300x250 AD

ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ಸೊಪ್ಪಿನ ಹೊಸಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಮೂಡ್ನಳ್ಳಿ ಹಾಗೂ ಬಂಗಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. 2022-23ನೇ ಸಾಲಿನ 5054 ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈ ರಸ್ತೆಗಳು ಸುಧಾರಣೆ ಆಗಲಿವೆ.

ಕುಮಟಾ ಕೊಡಮಡಗು ರಾಜ್ಯಹೆದ್ದಾರಿಯಿಂದ ಮೂಡ್ನಳ್ಳಿ ರಸ್ತೆ ಸುಧಾರಣೆಗೆ ₹50.00 ಲಕ್ಷ ಹಾಗೂ ಸಂತೆಗುಳಿ ನಿಲ್ಕುಂದ ರಸ್ತೆ ಅಭಿವೃದ್ಧಿಗೆ ₹80.00ಲಕ್ಷ ಅನುದಾನವನ್ನು ಹಿಂದಿನ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ಈ ಎರಡೂ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

300x250 AD

ಸೊಪ್ಪಿನ ಹೊಸಳ್ಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಶೈಲಾ ನಾಯ್ಕ, ಉಪಾಧ್ಯಕ್ಷ ಹನುಮಂತ ಗೌಡ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮೋಹನ ಪಿ. ನಾಯ್ಕ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೋಮನಾಥ ಭಂಡಾರಿ, ಗ್ರಾಮಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಖಾದರ್, ಮಾದೇವಿ ಮುಕ್ರಿ, ಭಾರತಿ ಮುಕ್ರಿ, ಈಶ್ವರ ಮರಾಠಿ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರಾದ ವಿನಾಯಕ ಭಟ್, ಗಜಾನನ ನಾಯ್ಕ, ಅರುಣ ನಾಯ್ಕ, ಹನುಮಂತ ನಾಯ್ಕ, ಗಜಾನನ ನಾಯ್ಕ ಬಾಸೊಳ್ಳಿ ಹಾಗೂ ಇತರರು ಇದ್ದರು.

Share This
300x250 AD
300x250 AD
300x250 AD
Back to top