Slide
Slide
Slide
previous arrow
next arrow

ಬೆಂಕಿ ತಗುಲಿ ಹುಲ್ಲಿನ ಹೊರೆ ಬೆಂಕಿಗಾಹುತಿ

300x250 AD

ಸಿದ್ದಾಪುರ: ಭತ್ತದ ಹುಲ್ಲಿನ ಹೊರೆ ಒಯ್ಯುತ್ತಿರುವಾದ ಟಿಪ್ಪರಗೆ ವಿದ್ಯುತ್ ತಂತಿ ತಗುಲಿ ಹುಲ್ಲಿನ ಹೊರೆ ಬೆಂಕಿಗಾಹುತಿಯಾದ ಘಟನೆ ತಾಲ್ಲೂಕಿನ ಹದಿನಾರನೇ ಮೈಲಿಕಲ್ ಹತ್ತಿರದ ಅಬಗಾರಗದ್ದೆಯಲ್ಲಿ ಶುಕ್ರವಾರ ನಡೆದಿದೆ.

ಅಣ್ಣಪ್ಪ ಬೀರಾ ನಾಯ್ಕ ತರಳಿ ಅವರು ತಮ್ಮ ಗದ್ದೆಯಲ್ಲಿ ಕಟಾವು ಮಾಡಿದ ಭತ್ತದ ಹುಲ್ಲನ್ನು ಟಿಪ್ಪರನಲ್ಲಿ ತುಂಬಿಕೊಂಡು ಮನೆಗೆ ತರುತ್ತಿರುವಾಗ ವಿದ್ಯುತ್ ತಂತಿ ತಗುಲಿ ಭತ್ತದ ಹುಲ್ಲಿನ ಹೊರೆಗೆ ಬೆಂಕಿಬಿದ್ದು ಹಾನಿ ಸಂಭವಿಸಿದೆ.

300x250 AD

ಸಿದ್ದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಹಾರ್ಸಿಕಟ್ಟಾ ಗ್ರಾಮ ಲೆಕ್ಕಾಧಿಕಾರಿ ಹನುಮಂತಪ್ಪ ವೈ ಭೇಟಿ ನೀಡಿ ಪಂಚನಾಮೆ ಮಾಡಿದ್ದು ಒಂದು ಲಕ್ಷ ರೂಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಿದ್ದಾರೆ.

Share This
300x250 AD
300x250 AD
300x250 AD
Back to top