Slide
Slide
Slide
previous arrow
next arrow

ಜಿಲ್ಲಾ ಸಾಹಿತ್ಯ ಸಮ್ಮೇಳನ: ನ.24ಕ್ಕೆ ಪೂರ್ವಭಾವಿ ಸಭೆ

300x250 AD

ಹೊನ್ನಾವರ: ತಾಲೂಕಿನಲ್ಲಿ ನಡೆಸಲು ಉದ್ದೇಶಿಸಿರುವ ಉತ್ತರ ಕನ್ನಡ ಜಿಲ್ಲಾ
23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ನವೆಂಬರ 24,
ಶುಕ್ರವಾರ ಮಧ್ಯಾಹ್ನ 2:30 ಗಂಟೆಗೆ ಹೊನ್ನಾವರ ತಾಲೂಕ ಪಂಚಾಯತ
ಸಭಾಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರ
ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಚೆನ್ನಬೈರಾ ದೇವಿಯ ಐತಿಹಾಸಿಕ ನೆಲವಾದ ಹೊನ್ನಾವರ ತಾಲೂಕಿನಲ್ಲಿ ಸುಮಾರು
25 ವರ್ಷಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು,
ಈ ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಹಾಗೂ ಹೊನ್ನಾವರ ತಾಲೂಕಿನ ಸರ್ವರ
ಸಹಕಾರದ ಅಗತ್ಯವಿದೆ.

ಕನ್ನಡಿಗರ ಪ್ರಾಥಮಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು
ವಾರ್ಷಿಕವಾಗಿ ಸಾಹಿತ್ಯ ಸಮ್ಮೇಳನ ನಡೆಸಿಕೊಂಡು ಬಂದಿರುವುದು ವಾಡಿಕೆ.
ಅದರಲ್ಲೂ ಈ ಅವಧಿಯಲ್ಲಿ ಅನುದಾನವೂ ಸೇರಿದಂತೆ ಯಾವುದೇ ರೀತಿಯ
ಸಮಸ್ಯೆಯಿದ್ದರೂ ಪ್ರತೀ ವರ್ಷ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಆ
ಹಿನ್ನಲೆಯಲ್ಲಿ ಅನುದಾನದ ಸಮಸ್ಯೆ ಇದ್ದರೂ ಕೂಡ ಈ ವರ್ಷವೂ ಜಿಲ್ಲಾ ಸಾಹಿತ್ಯ
ಸಮ್ಮೇಳನ ನಡೆಸಲು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮುಂದಾಗಿದೆ.
ಹೊನ್ನಾವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತಾವನೆಯ ಮೇರೆಗೆ
ಈ ಬಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಹೊನ್ನಾವರ ತಾಲೂಕಿನಲ್ಲಿ ನಡೆಯಲಿದ್ದು,
ಇದಕ್ಕೆ ಜಿಲ್ಲಾ ಸಮಿತಿ ಸರ್ವಾನುಮತದ ಸಮ್ಮತಿಯನ್ನು ನೀಡಿದೆ.

ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದಲ್ಲಿ ಸ್ಥಳೀಯ ಶಾಸಕರನ್ನು
ಒಳಗೊಂಡು ಸ್ವಾಗತ ಸಮಿತಿಯನ್ನು ರಚಿಸುವುದು ನಡೆದುಕೊಂಡು
ಬAದಿರುವ ಪರಂಪರೆ. ಆ ಹಿನ್ನೆಲೆಯಲ್ಲಿ ಸಮ್ಮೇಳನ ವನ್ನು ಯಶಸ್ವಿಯಾಗಿ
ಸಂಘಟಿಸುವುದಕ್ಕಾಗಿ , ಜೊತೆಗೆ ಸಮ್ಮೇಳನದ ಸ್ವಾಗತ ಸಮಿತಿಯನ್ನು
ರಚಿಸುವುದಕ್ಕಾಗಿ ನವೆಂಬರ 24 ರಂದು ಮಧ್ಯಾಹ್ನ 2:30 ಗಂಟೆಗೆ ಹೊನ್ನಾವರ
ತಾಲೂಕು ಪಂಚಾಯತ್ ಸಭಾ ಭವನದಲ್ಲಿ ಪೂರ್ವಭಾವಿ ಸಭೆಯನ್ನು
ಕರೆಯಲಾಗಿದೆ.

300x250 AD

ಈ ಸಭೆಯಲ್ಲಿ ತಾಲೂಕಿನ ಗೌರವಾನ್ವಿತ ಜನಪ್ರತಿನಿಧಿಗಳು, ಇಲಾಖಾ
ಅಧಿಕಾರಿಗಳು, ಹಿರಿ-ಕಿರಿಯ ಸಾಹಿತಿಗಳು, ಬರಹಗಾರರು, ಕನ್ನಡಪರ
ಸಂಘಟನೆಗಳ ಪದಾಧಿಕಾರಿಗಳು, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಜನಪರ

ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಾದ್ಯಮದವರು ಹಾಗೂ ಆಸಕ್ತ ಎಲ್ಲ
ಸಹೃದಯಗಳು ಭಾಗವಹಿಸಿ ಸಮ್ಮೇಳನದ ಯಶಸ್ಸಿನ ಕುರಿತಂತೆ ಸೂಕ್ತ
ಸಲಹೆ-ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

Share This
300x250 AD
300x250 AD
300x250 AD
Back to top