Slide
Slide
Slide
previous arrow
next arrow

ಸೈಲ್-ನಾನು ಲವ-ಕುಶರಿದ್ದಂತೆ: ಮಂಕಾಳ ವೈದ್ಯ

300x250 AD

ಕಾರವಾರ: ಶಾಸಕ ಸತೀಶ್ ಸೈಲ್ ಹಾಗೂ ನಾನು ಲವ ಕುಶ ಇದ್ದಂತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಕೆಡಿಪಿ ಸಭೆಯಲ್ಲಿ ಆಯುಷ್ಮಾನ್ ಇಲಾಖೆಯ ಬಗ್ಗೆ ಚರ್ಚೆ ನಡೆಯುವ ವೇಳೆ ಅಧಿಕಾರಿಗಳು ಆರೋಪ ಬಂದಾಗ ತಾಳ್ಮೆಯಿಂದ ಇರುವಂತೆ ಸಚಿವರು ತಿಳಿಸಿದರು. ಪತ್ರಿಕೆಯೊಂದರಲ್ಲಿ ನಾನು- ಸತೀಶ್ ಸೈಲ್ ಗಂಢಬೇರುಂಢ- ಸಂಗ್ಯಾಬಾಳ್ಯ ಅಂತೆಲ್ಲಾ ಬರೆಯುತ್ತಿದ್ದಾರೆ. ಇಬ್ಬರ ನಡುವೆ ಸಂಬಂಧ ಹಾಳಾಗಿದೆ ಎಂದು ಬರೆಯುತ್ತಿದ್ದಾರೆ. ಆದರೆ ನಮ್ಮ ನಡುವೆ ಯಾವ ಸಂಬಂಧವೂ ಹಾಳಾಗಿಲ್ಲ. ನಮ್ಮಿಬ್ಬರಲ್ಲಿ ಯಾರು ಮಂತ್ರಿ ಆಗಬೇಕು ಎಂದು ಕೇಳಿದಾಗ ಸತೀಶ್ ಸೈಲ್ ಅವರೇ ಮಂಕಾಳ ವೈದ್ಯ ಆಗಲಿ ಎಂದು ಹೇಳಿದ್ದರು ಎಂದರು.

300x250 AD

ನನ್ನ ಹಾಗೂ ಸತೀಶ್ ಸೈಲ್ ನಡುವೆ ಯಾವುದೇ ಸಂಬಂಧ ಹಾಳಾಗಿಲ್ಲ. ಇಬ್ಬರ ನಡುವೆ ಉತ್ತಮ ಬಾಂಧವ್ಯವೇ ಇದೆ. ಇಬ್ಬರನ್ನು ಲವ ಕುಶ ಎಂದು ಕರೆದರೆ ಬೇಸರವಿಲ್ಲ ಎಂದು ಮಂಕಾಳ ವೈದ್ಯ ಹೇಳಿದರು. ಇನ್ನು ಭೀಮಣ್ಣ ನಾಯ್ಕ ಅವರ ವಿರುದ್ದವೂ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ ಎಂದಿದ್ದಾರೆ. ಬರೆಯಲಿ, ಬರೆದಾಗಲೇ ಬೆಳೆಯುವುದು, ಭೀಮಣ್ಣ ನಾಯ್ಕ ಅವರು ಮಂತ್ರಿಯಾಗಲಿ ಎಂದು ಮಂಕಾಳ ವೈದ್ಯ ಹೇಳಿದ್ದಾರೆ

Share This
300x250 AD
300x250 AD
300x250 AD
Back to top