Slide
Slide
Slide
previous arrow
next arrow

ಫೋಟೋಶೂಟ್ ದೋಣಿಗಳಿಂದಾಗಿ ಅಪ್ಪಳಿಸಿದ ತೆರೆ: ಆಯತಪ್ಪಿ ನದಿಗೆ ಬಿದ್ದ ಮಗು

300x250 AD

ಹೊನ್ನಾವರ: ತಾಲೂಕಿನ ತನ್ಮಡಗಿಯ ಹತ್ತಿರ ಶರಾವತಿ ಹಿನ್ನೀರಿನಲ್ಲಿ ಅತಿವೇಗವಾಗಿ ಎರಡೆರಡು ಬೋಟ್ ಧಾವಿಸಿದ್ದರಿಂದ ಉಂಟಾದ ತೆರೆಗೆ ಏಕಾಏಕಿ ತೆರೆ ಅಪ್ಪಳಿಸಿ ದೋಣಿ ಮಗುಚಿದ ಪರಿಣಾಮ ಬಾಲಕಿಯೊರ್ವಳು ನದಿಯಲ್ಲಿ ಮುಳುಗಿದ್ದು,ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ತನ್ಮಡಗಿ ನಿವಾಸಿ ವೃತ್ತಿಯಲ್ಲಿ ಮೀನುಗಾರಳಾಗಿರುವ ಮೋಹಿನಿ ವೆಂಕಟೇಶ ಅಂಬಿಗ ತಮ್ಮ ನಾಲ್ಕುವರೆ ವರ್ಷದ ಮಗಳಾದ ದಿಶಾಳನ್ನು ಕುಳ್ಳಿರಿಸಿಕೊಂಡು ತಾವೆ ದೋಣಿ ಚಲಾಯಿಸಿಕೊಂಡು ನದಿ ದಾಟಲು ಸಜ್ಜಾಗಿದ್ದರು. ಈ ವೇಳೆ ದೋಣಿಯಲ್ಲಿದ್ದ ನೀರನ್ನು ಕ್ಲಿನ್ ಮಾಡುತ್ತಿರುವಾಗ ಫೋಟೋ,ವಿಡಿಯೋ ಶೂಟ್ ನಡೆಸುವ ಎರಡೆರಡು ಬೋಟ್ ನದಿಯಲ್ಲಿ ವೇಗವಾಗಿ ಬಂದ ಪರಿಣಾಮ ತೆರೆ ಅಪ್ಪಳಿಸಿ ದೊಣಿಯಲಿದ್ದ ಮಗು ನದಿಗೆ ಬಿದ್ದಿದೆ. ತಕ್ಷಣವೇ ಸ್ಥಳೀಯರು ಧಾವಿಸಿ ನದಿಯಲ್ಲಿ ಬಿದ್ದ ಮಗುವನ್ನು ರಕ್ಷಿಸಿದ್ದಾರೆ.ಆದರೆ ಅದಾಗಲೇ ಹೊಟ್ಟೆಗೆ ನೀರು ಸೇರಿ ಉಸಿರಾಟದಲ್ಲಿ ಏರುಪೇರಾಗಿತ್ತು. ತಕ್ಷಣವೇ ಸ್ಥಳೀಯರ ಸಹಕಾರದಿಂದ ಹೊನ್ನಾವರ ತಾಲೂಕಾಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top