Slide
Slide
Slide
previous arrow
next arrow

ಫಾರಂ ನಂ.3 ಕಿರಿಕಿರಿ: ಪ.ಪಂ. ಸಿಬ್ಬಂದಿಗೆ ಶಾಸಕ ಹೆಬ್ಬಾರ್ ತರಾಟೆ

300x250 AD

ಮುಂಡಗೋಡ: ನಮೂನೆ 3 (ಫಾರಂ ನಂಬರ್ 3) ನೀಡಲು ಸಾರ್ವಜನಿಕರಿಗೆ ಸತಾಯಿಸುತ್ತಿದ್ದ ಪಟ್ಟಣ ಪಂಚಾಯತ ಸಿಬ್ಬಂದಿಗೆ ಶಾಸಕ ಶಿವರಾಮ ಹೆಬ್ಬಾರ್ ತರಾಟೆಗೆ ತೆಗೆದುಕೊಂಡರು.

ಇಲ್ಲಿಯ ಪಟ್ಟಣ ಪಚಾಯತ ಸಭಾಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದ ಸಂದರ್ಭದಲ್ಲಿ ಅಲ್ಲಿಯ ಸಿಬ್ಬಂದಿ ಮಂಜುನಾಥ ಮುಚ್ಚಂಡಿ ಅವರನ್ನು ತರಾಟೆಗೆ ತೆಗೆದುಕೊಂಡು, ಸಾರ್ವಜನಿಕರಿಗೆ ನಮೂನೆ 3 ನೀಡಲು ಯಾಕೆ ಸತಾಯಿಸುತ್ತಿಯಾ? ನಿನ್ನನ್ನು ಈ ಹಿಂದೆ ವರ್ಗಾವಣೆ ಮಾಡಬೇಕು ಎಂದು ಹೇಳಿದ್ದರು. ಸಿಬ್ಬಂದಿಗಳು ಇಲ್ಲ ಎಂದು ನಾನು ಇಟ್ಟಿದ್ದು ನನ್ನ ತಪ್ಪು. ಸರಿಯಾಗಿ ಕೆಲಸ ಮಾಡು ಎಂದು ಶಾಸಕರು ಎಚ್ಚರಿಕೆ ನೀಡಿದರು.

300x250 AD

ಸ್ಲಮ್ ಮಂಡಳಿಗೆ ಸಾರ್ವಜನಿಕರು ಹಣ ತುಂಬಿ ರೆಜಿಸ್ಟರ್ ಮಾಡಿಕೊಂಡು ದಾಖಲೆ ಪತ್ರಗಳು ತೆಗೆದುಕೊಂಡು ಬಂದರೂ ಯಾಕೆ ಸತಾಯಿಸುತ್ತಿದ್ದಿಯಾ? ಕೆಲಸ ಮಾಡಲು ನಿನಗೆ ಮನಸ್ಸಿಲ್ಲವೆಂದರೆ ಬೇರೆ ಕಡೆ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿ ಪ.ಪಂ ಅಧಿಕಾರಿಗೆ ಅವರ ಮೇಲೆ ಠರಾವು ಮಾಡಿ ವರ್ಗಾವಣೆ ಮಾಡಿ. ಇಲ್ಲವೆಂದರೆ ಹೊಸಬರು ಯಾರು ಬಂದಿದ್ದಾರೆ ಅವರನ್ನು ನೇಮಿಸಿ. ಅವರ ಸ್ಥಳಕ್ಕೆ ಮುಚ್ಚಂಡಿಯನ್ನು ನೇಮಿಸಿ ಎಂದು ಹೇಳಿದರು.

Share This
300x250 AD
300x250 AD
300x250 AD
Back to top