Slide
Slide
Slide
previous arrow
next arrow

ಗೋಕರ್ಣಕ್ಕೆ ಶೌರ್ಯ ಜಾಗರಣ ರಥ

300x250 AD

ಗೋಕರ್ಣ: ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ಶೌರ್ಯ ಜಾಗರಣ ರಥಯಾತ್ರೆ ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿತ್ತು. ಇಲ್ಲಿಯ ಮಾರುತಿ ಕಟ್ಟೆಯ ಸಮೀಪ ಪ್ರಮುಖರು ಹಿಂದೂ ಸಂಘಟನೆಯವರು ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.

ಚಂಡೇ ವಾದನದೊಂದಿಗೆ ಗಂಜಿಗದ್ದೆ ಮಾರ್ಗವಾಗಿ ಸಾಗಿದ ಈ ರಥವು ರಥಬೀದಿಯ ಸುಭಾಷ್ ಚೌಕಕ್ಕೆ ಆಗಮಿಸಿತ್ತು. ಈ ವೇಳೆ ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಶಂಕರ ಭಟ್ ಈ ಯಾತ್ರೆಯ ಕುರಿತು ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಜನ್ನು, ಬಿಜೆಪಿ ಪ್ರಮುಖರಾದ ಕುಮಾರ ಮಾರ್ಕಾಂಡೆ, ಗಣೇಶ ಪಂಡಿತ, ಚಂದ್ರಶೇಖರ ನಾಯ್ಕ, ಮಹೆಶ ಶೆಟ್ಟಿ, ಸಣ್ಣು ಗೌಡ, ರಮೇಶ ಪ್ರಸಾದ, ಶೇಖರ ನಾಯ್ಕ, ಗಣಪತಿ ನಾಯ್ಕ, ಸುಜಯ ಶೆಟ್ಟಿ, ಅಮೃತೇಶ ಹೀರೆ, ರವಿ ಗುನಗ, ಗಣಪತಿ ಅಡಿ, ಜಗದೀಶ ಅಂಬಿಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top