Slide
Slide
Slide
previous arrow
next arrow

ಡಾ.ಮೋಹನ ನಾಯ್ಕರ ಸಂಶೋಧನಾ ಕೃತಿ ಬಿಡುಗಡೆ

300x250 AD

ಸಿದ್ದಾಪುರ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ, ಜೇನುಕೃಷಿ ವಿಭಾಗದ ಮುಖ್ಯಸ್ಥ, ಮೂಲತಃ ತಾಲೂಕಿನ ಕೋಲಸಿರ್ಸಿಯ ಡಾ.ಮೋಹನ ನಾಯ್ಕ ರಚನೆಯ ‘Vertebrate pets in Agriculture landscape of Karnataka and There Eco friendly Management ‘ ಎಂಬ ಕೃಷಿ ಸಂಶೋಧನಾ ಕೃತಿ ಬಿಡುಗಡೆಗೊಂಡಿದೆ.

ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ 58ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ಕುಲಪತಿ ಡಾ.ಎಸ್.ವಿ.ಸುರೇಶ್ ಕೃತಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಡಾ.ಲಕ್ಷೀಪತಿ ಗೌಡ, ಡಾ.ಪ್ರಭಾಕರ ಶೆಟ್ಟಿ, ಡಾ.ಹರೀಶ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಮೋಹನ್ ನಾಯ್ಕರವರ ಕೃಷಿಸಂಶೋಧನಾ ಕಾರ್ಯಸಾಧನೆಯನ್ನು ಪ್ರಶಂಸಿಸಿದರು.

300x250 AD

ಅಭಿನಂದನೆ: ಡಾ.ಮೋಹನ ನಾಯ್ಕ ಕೋಲಸಿರ್ಸಿ ಇವರ ಕೃತಿ ಸಾಧನೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ನಾಯ್ಕ, ಕೋಶಾಧ್ಯಕ್ಷ ಪಿ.ಬಿ.ಹೊಸೂರು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top