Slide
Slide
Slide
previous arrow
next arrow

ಅ.7ಕ್ಕೆ ‘ನಾದೋಪಾಸನಮ್’ ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ನಾದಾನುಸಂಧಾನಂ ಟ್ರಸ್ಟ್ (ರಿ) ವತಿಯಿಂದ ಸಂಗೀತ ಸಂಧ್ಯಾ “ನಾದೋಪಾಸನಮ್” ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಅ.7, ಶನಿವಾರ ಸಂಜೆ 4.30 ರಿಂದ ಇಲ್ಲಿನ ಟಿ.ಆರ್.ಸಿ. ಬ್ಯಾಂಕ್ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಪಂ. ಗಣಪತಿ ಭಟ್ ಹಾಸಣಗಿ, ಪಂ. ಕೃಷ್ಣಂದ್ರ ವಾಡೇಕರ್, ಹುಬ್ಬಳ್ಳಿ, ಶ್ರೀಮತಿ ಮೇಧಾ ಭಟ್, ಅಗ್ಗೇರೆ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದು, ತಬಲಾದಲ್ಲಿ ಪಂ. ಗೋಪಾಲಕೃಷ್ಣ ಹೆಗಡೆ, ಕಲಭಾಗ, ಗುರುರಾಜ ಹೆಗಡೆ, ಆಡುಕಳ, ಸಂವಾದಿನಿಯಲ್ಲಿ ವಿದ್ವಾನ್ ಪ್ರಕಾಶ ಹೆಗಡೆ, ಯಡಳ್ಳಿ, ಭರತ್ ಹೆಗಡೆ ಹೆಬ್ಬಲಸು ಸಹಕರಿಸಲಿದ್ದು, ಗಿರಿಧರ ಕಬ್ನಳ್ಳಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವ ಸಂಗೀತಾಭಿಮಾನಿಗಳು ಆಗಮಿಸಿ, ಕಾರ್ಯಕ್ರಮವನ್ನು ಸ್ಮರಣೀಯ ಮತ್ತು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Share This
300x250 AD
300x250 AD
300x250 AD
Back to top