Slide
Slide
Slide
previous arrow
next arrow

ಪ್ರತಿಭಾ ಕಾರಂಜಿಯಲ್ಲಿ ಮಂಜಗುಣಿ ಶಾಲಾ ವಿದ್ಯಾರ್ಥಿಗಳ ಸಾಧನೆ

300x250 AD

ಅಂಕೋಲಾ: ವಾಡಿಬೊಗ್ರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಿನ ಮಂಜಗುಣಿಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಧನ್ಯ ನಾಯ್ಕ ಕವನ ವಾಚನ, ಮನಿಷಾ ಗೌಡ ಆಶುಭಾಷಣ, ಸೃಜನ್ ಕ್ಲೇ ಮಾಡಲಿಂಗ್, ಸನ್ನಿಧಿ ನಾಯ್ಕ ಅಭಿನಯ ಗೀತೆ, ನಿವೇದ್ ನಾಯ್ಕ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಹಿಂದಿ ಕಂಠಪಾಠ ಸೌಜನ್ಯ, ಭಗವದ್ಗೀತೆ ಧನ್ಯಾ, ಛದ್ಮವೇಷ ಸೃಜನ್ ಸಂತೋಷ ನಾಯ್ಕ, ಕಥೆ ಹೇಳುವುದು ಮನಿಷಾ, ಮಿಮಿಕ್ರಿ ಸುಹಾಸ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಭಕ್ತಿ ಗೀತೆ ಸುಚಿತಾ, ಕನ್ನಡ ಕಂಠಪಾಠ ಸಹನಾ, ಲಘು ಸಂಗೀತ ಪ್ರತೀಕ್ಷಾ, ಇಂಗ್ಲಿಷ್ ಕಂಠಪಾಠ ಸಹನಾ, ನಾಗರಾಜ ಚಿತ್ರಕಲೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.

300x250 AD

ಮುಖ್ಯಾಧ್ಯಾಪಕ ಶ್ರೀನಿವಾಸ ನಾಯಕ, ಶಿಕ್ಷಕಿಯರಾದ ಭಾರತಿ ಗಾಟಗೆ, ದೀಪಾ ಜಟ್ಟಿ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ ನಾಯ್ಕ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share This
300x250 AD
300x250 AD
300x250 AD
Back to top