ಹೊನ್ನಾವರ: ತಾಲೂಕಿನ ಕವಲಕ್ಕಿಯ ಶ್ರೀಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಬಾಲಕರಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಆಡಳಿತಾಧಿಕಾರಿ ಎಂ.ಎಸ್.ಹೆಗಡೆ ಗುಣವಂತೆಯವರು ಶ್ರಾವಣ ಮಾಸದ ಮಹತ್ವ, ಶಿವಾರಾಧನೆಯ ಕುರಿತು ಮಾತನಾಡಿದರು. ನಿರ್ಣಾಯಕರಾಗಿ ವೈಲೇಟ ಫರ್ನಾಂಡಿಸ್ ಸಂಗೀತ ಹೆಗಡೆ ಹಾಗೂ ವನಿತಾ ನೊರೊನಾ ಆಗಮಿಸಿದ್ದು.ಅಶ್ವಿನಿ ಮೇಸ್ತ ಸ್ವಾಗತಿಸಿ ವಂದಿಸಿದರು. ರಮ್ಯ ಹೆಗಡೆಯವರು ನಿರ್ವಹಿಸಿದರು. ವಿದ್ಯಾರ್ಥಿಗಳು ಪಾಲಕರು ಪೋಷಕರು ಉಪಸ್ಥಿತರಿದ್ದರು.
ಶ್ರಾವಣ ಶನಿವಾರ: ಛದ್ಮವೇಷ ಸ್ಪರ್ಧೆ
![](https://euttarakannada.in/wp-content/uploads/2023/09/09kar14-1-730x438.jpg?v=1694331264)