• Slide
    Slide
    Slide
    previous arrow
    next arrow
  • ಮೂವರು ಶಿಕ್ಷಕರು ಜಿಲ್ಲಾಮಟ್ಟದ ‘ಪಾಂಡುರಂಗ’ ಪ್ರಶಸ್ತಿಗೆ ಆಯ್ಕೆ

    300x250 AD

    ಸಿದ್ದಾಪುರ: ಅರುಣೋದಯ ಸಂಸ್ಥೆಯವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗಾಗಿ ನೀಡುತ್ತಿರುವ 2023ನೇ ಸಾಲಿನ ‘ಪಾಂಡುರಂಗ’ ಪ್ರಶಸ್ತಿಗೆ ಮೂವರ ಹೆಸರನ್ನು ಪ್ರಕಟಗೊಳಿಸಿದೆ. ಕುಮಟಾ ಗುಡಿಗಾರಗಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಜುನಾಥ ಎಂ.ನಾಯ್ಕ, ಶಿರಸಿ ಹುಲೇಕಲ್ ಶ್ರೀದೇವಿ ಪ್ರೌಡಶಾಲೆ ಸಹ ಶಿಕ್ಷಕ ಗಣೇಶ ಬಂಟ ಹಾಗೂ ಶಿರಸಿ ನೈಗಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಧ್ಯಾಪಕ ಸುರೇಶ ಕೆ.ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

    ಶಿಕ್ಷಣ ಕ್ಷೇತ್ರದಲ್ಲಿ ಇವರ ಗಮನಾರ್ಹ ಸೇವೆಯನ್ನು ಹಾಗೂ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶ್ರೀಯುತರು ತೋರುತ್ತಿರುವ ವಿಶೇಷ ಕಾಳಜಿಯನ್ನು ಪರಿಗಣಿಸಿ ಅವರನ್ನು ‘ಪಾಂಡುರಂಗ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರುಣೋದಯ ಸಂಸ್ಥೆಯವರು ದಿ.ಪಾಂಡುರಂಗ ಬಿ.ನಾಯ್ಕ ಇವರ ಹೆಸರಿನಲ್ಲಿ ಕಳೆದ 16 ವರ್ಷಗಳಿಂದ ಜಿಲ್ಲೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಅವರನ್ನು ಶಿಕ್ಷಕರ ದಿನಾಚರಣೆಯಂದು ಗೌರವಿಸುತ್ತಾ ಬಂದಿದ್ದಾರೆ.
    ಈ ಪ್ರಶಸ್ತಿಯನ್ನು ಶಿರಸಿಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಅರುಣೋದಯ ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top