• Slide
    Slide
    Slide
    previous arrow
    next arrow
  • ಬಹ್ಮರ್ಷಿ ನಾರಾಯಣ ಗುರು ಅವರ ಚಿಂತನೆ ವಿಶ್ವಕ್ಕೇ ಮಾರ್ಗದರ್ಶಿ: ಶಿವಾನಂದ ನಾಯ್ಕ

    300x250 AD

    ಭಟ್ಕಳ: ಬಹ್ಮರ್ಷಿ ನಾರಾಯಣ ಗುರು ಅವರ ಶಿಕ್ಷಣದಿಂದ ಸ್ವತಂತ್ರರಾಗಿ ಸಂಘಟನೆಯಿoದ ಶಕ್ತಿವಂತರಾಗಿ ಎಂಬ ಚಿಂತನೆ ವಿಶ್ವಕ್ಕೇ ಮಾರ್ಗದರ್ಶಿ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಾನಂದ ನಾಯ್ಕ ಹೇಳಿದರು.

    ಅವರು ಇಲ್ಲಿನ ಶ್ರೀನಾರಾಯಣ ಗುರು ವಸತಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ನಡೆದ ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ತಾಲೂಕು ನಾರಾಯಣ ಗುರು ಜಯಂತಿ ಸಮಿತಿಯ ಸಂಚಾಲಕ ಮನಮೋಹನ ನಾಯ್ಕ ಮಾತನಾಡಿ, ನಾರಾಯಣ ಗುರುಗಳು ಸಾಮಾಜಿಕ ಪರಿವರ್ತನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹನೀಯರು. ಅವರ ಜಯಂತಿಯನ್ನು ತಾಲೂಕು ಮಟ್ಟದಲ್ಲಿ ಬೃಹತ್ ಪ್ರಮಾಣದಲ್ಲಿ ಆಯೋಜನೆ ಮಾಡಲು ಸಿದ್ಧತೆ ನಡೆಯುತ್ತಿದ್ದು, ಸೆ.10ರಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು.

    300x250 AD

    ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ನಾರಾಯಣ ಗುರು ವಸತಿಶಾಲೆಯ ಪ್ರಾಂಶುಪಾಲ ರಮೇಶ ನಾಯ್ಕ ನಾರಾಯಣ ಗುರುಗಳ ಕೊಡುಗೆಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ನಾರಾಯಣ ಗುರುಗಳ ಜೀವನ ಮತ್ತು ಸಾಮಾಜಿಕ ಸುಧಾರಣೆಗಳು ಎಂಬ ವಿಷಯದ ಕುರಿತು ನಡೆದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಷತ್ ವತಿಯಿಂದ ಬಹುಮಾನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಆಶಿತಾ ನಾಯ್ಕ ಪ್ರಥಮ, ರೋಹನ ಗುಡಿಗಾರ ದ್ವಿತೀಯ, ಶ್ರೇಯಾ ಜಿ.ಗೌಡ ತೃತೀಯ ಬಹುಮಾನ ಪಡೆದರೆ ಭಾಷಣ ಸ್ಪರ್ಧೆಯಲ್ಲಿ ಆಶಿಕಾ ನಾಯ್ಕ ಮತ್ತು ಮಂಜುನಾಥ ನಾಯ್ಕ ಪ್ರಥಮ, ಛಾಯಾ ನಾಯ್ಕ ದ್ವಿತೀಯ ಹಾಗೂ ಹರೀಶ ದೊಡ್ಮನಿ ತೃತೀಯ ಬಹುಮಾನ ಪಡೆದರು.
    ಕಾರ್ಯಕ್ರಮದಲ್ಲಿ ಪಾಂಡುರoಗ ನಾಯ್ಕ, ಶಿಕ್ಷಕರಾದ ರಾಧಿಕಾ ಗೌಡ, ವಿಜಿತಾ ನಾಯ್ಕ, ವೆಂಕಟೇಶ ಮುಕ್ರಿ, ಅನಿಲ ದೇಶಬಂಢಾರಿ, ಕುಲದೀಪ ನಾಯ್ಕ, ವಿದ್ಯಾರ್ಥಿಗಳು ಹಾಗೂ ಪಾಲಕವೃಂದದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top