Slide
Slide
Slide
previous arrow
next arrow

ಬೈಕ್’ಗಳ ನಡುವೆ ಡಿಕ್ಕಿ: ನಾಲ್ವರಿಗೆ ಗಾಯ

300x250 AD

ಸಿದ್ದಾಪುರ: ತಾಲೂಕಿನ ವಂದಾನೆ ಸಮೀಪದ ಶಿರೂರು ಮಾರಿಸಾಲ ಬಳಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ನಾಲ್ವರಿಗೆ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ದೊಡ್ಮನೆ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಬಿಳಗಿ ಕಡೆಯಿಂದ ವಂದಾನೆ ಕಡೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತವಾಗಿದ್ದು, ಕಡಕೇರಿ ಮೂಲದ ಇಬ್ಬರಿಗೆ ಮತ್ತು ಇನ್ನೊಂದು ಬೈಕ್ ನಲ್ಲಿರುವ ಹೊಡವತ್ತಿ ಮೂಲದ ಕೃಷ್ಣ, ವಿಜಯಲಕ್ಷ್ಮಿ ಎನ್ನುವವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

300x250 AD

ಘಟನೆಯಲ್ಲಿ ನಾಲ್ವರು ಸವಾರರ ಕೈ, ಕಾಲು, ತಲೆಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ರವಾನಿಸಲಾಗಿದೆ.

Share This
300x250 AD
300x250 AD
300x250 AD
Back to top