• Slide
    Slide
    Slide
    previous arrow
    next arrow
  • ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನವೀನ ಪಟಗಾರ ನೇಮಕ

    300x250 AD

    ಹೊನ್ನಾವರ: ತಾಲೂಕ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡ ನವೀನ ಪಟಗಾರ ನವಿಲಗೋಣ ಇವರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷ ಸಿರಿಲ್ ಪ್ರಭು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

    ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯ ಮೊದಲು ಪಕ್ಷ ವಿರೋಧ ಚಟುವಟಿಕೆಯಿಂದ ಅಮಾನತು ಆಗಿದ್ದ ಯುವ ಕಾಂಗ್ರೇಸ್ ಅಧ್ಯಕ್ಷ ಸಂದೇಶ ಶೆಟ್ಟಿ ಇವರ ಸ್ಥಾನಕ್ಕೆ ನೇಮಕವಾಗಿದೆ. ಕೆಲ ದಿನದ ಹಿಂದೆ ರಾಷ್ಟ್ರೀಯ ಯುವ ಕಾಂಗ್ರೇಸ್ ಸಮಾವೇಶದಲ್ಲಿ ಇವರಿಗೆ ನೀಡಿದ ಸ್ಥಾನಮಾನದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು. ಇದರಿಂದ ಕಾಂಗ್ರೇಸ್ ನಾಯಕರು ಮುಜಗರಕ್ಕೆ ಒಳಗಾಗಿದ್ದರು. ಈ ಬಗ್ಗೆ ಜಿಲ್ಲಾಧ್ಯಕ್ಷರು, ರಾಜ್ಯ ನಾಯಕರು ಉತ್ತರಿಸಬೇಕೆನ್ನುವ ಕಾರ್ಯಕರ್ತರ ಆಗ್ರಹ ಹೆಚ್ಚಳವಾಗುತ್ತಿದ್ದಂತೆ ಈ ಆದೇಶ ಜಾರಿಯಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top