Slide
Slide
Slide
previous arrow
next arrow

ಆ.6ಕ್ಕೆ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ 108ನೇ ಕೃತಿ ಅನಾವರಣ

300x250 AD

ದಾಂಡೇಲಿ: ನಗರದ ಮಾಸ್ಕೇರಿ ಸಾಹಿತ್ಯ ಸಂಸ್ಥೆಯ ಆಶ್ರಯದಡಿ ಸಂಸ್ಥೆಯ 108ನೇ ಕೃತಿ ಅನಾವರಣ ಕಾರ್ಯಕ್ರಮವು ಆ.6ರಂದು ಮಧ್ಯಾಹ್ನ 3 ಗಂಟೆಗೆ ಮಾಸ್ಕೇರಿ ಸಾಹಿತ್ಯ ಸಂಸ್ಥೆಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರವರ್ತಕ ಮಾಸ್ಕೇರಿ ನಾಯಕ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಲೇಖಕಿ ಕಾವ್ಯ ಭಟ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕವಯತ್ರಿ ಸಾಕ್ಷಿ ದೀಪಕ್ ಸಾಮಂತ್, ಕ್ರೀಡಾಪಟು ಸಂಜನಾ.ಬಿ.ಮಾಶಾಲ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಫಿಕ್ ಡಿಸೈನರ್ ಐಶ್ವರ್ಯ ಗುರುರಾಜ್ ವಹಿಸಲಿದ್ದು, ಕಾರ್ಯಕ್ರಮದಲ್ಲಿ ಸಮಾಜ ಸೇವಕ ಜಿ.ಪಿ ಪೆರುಮಾಳ ಅವರನ್ನು ಸನ್ಮಾನಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲು ಅವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top