Slide
Slide
Slide
previous arrow
next arrow

ಯುಪಿ ಮಾದರಿ ಪ್ರೇರಣೆ: ದೇಶವ್ಯಾಪಿ ಆಯುಷ್ಮಾನ್‌ ಮೇಳ ಆಯೋಜನೆಗೆ ಚಿಂತನೆ

300x250 AD

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಯುಪಿ ಮಾದರಿಯನ್ನು ಇಡೀ ರಾಷ್ಟ್ರದಾದ್ಯಂತ ಆರೋಗ್ಯ ಕ್ಷೇತ್ರಕ್ಕೆ ಅಳವಡಿಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. ದೇಶವ್ಯಾಪಿಯಾಗಿ ಆಯುಷ್ಮಾನ್‌ ಮೇಳ ಆಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ.

ಸಮಾಜದ ಕಟ್ಟಕಡೆಯ ಜನರಿಗೆ ಆರೋಗ್ಯ ಸೌಲಭ್ಯ ಮತ್ತು ಸೇವೆಗಳನ್ನು ಒದಗಿಸುವ ಸಲುವಾಗಿ, ಸಿಎಂ ಯೋಗಿ ಆದಿತ್ಯನಾಥ್ ಫೆಬ್ರವರಿ 2020 ರಲ್ಲಿ ಮುಖ್ಯಮಂತ್ರಿ ಜನ ಆರೋಗ್ಯ ಮೇಳವನ್ನು ಪ್ರಾರಂಭಿಸಿದರು. ಇದುವರೆಗೆ ಇಡೀ ರಾಜ್ಯದ 12 ಕೋಟಿಗೂ ಹೆಚ್ಚು ರೋಗಿಗಳು ಈ ಮೇಳದ ಪ್ರಯೋಜನ ಪಡೆದಿದ್ದಾರೆ. ಪ್ರತಿ ಭಾನುವಾರ ಇದು ನಡೆಯುತ್ತದೆ. ಈ ಯಶಸ್ವಿ ಅಭಿಯಾನವನ್ನು ಮಾದರಿಯಾಗಿ ತೆಗೆದುಕೊಂಡು ಕೇಂದ್ರ ಸರ್ಕಾರವು ದೇಶಾದ್ಯಂತ ಆಯುಷ್ಮಾನ್ ಮೇಳಗಳನ್ನು ಆಯೋಜಿಸಲು ಯೋಜಿಸಿದೆ.

300x250 AD

ಸಾರ್ವಜನಿಕ ಆರೋಗ್ಯ ಮೇಳಗಳ ಪರಿಕಲ್ಪನೆಯನ್ನು ಯೋಗಿ ಸರ್ಕಾರ ಜಾರಿಗೆ ತಂದಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಕಚೇರಿ ಪ್ರಕಟಣೆ ತಿಳಿಸಿದೆ. ಈ ಮೇಳಗಳು ಪಾಲ್ಗೊಳ್ಳುವವರಿಗೆ ತ್ವರಿತ ವೈದ್ಯಕೀಯ ಸೇವೆಯನ್ನು ಒದಗಿಸುತ್ತವೆ, ನಿರ್ಣಾಯಕ ರೋಗಿಗಳನ್ನು ವಿಶೇಷ ಆರೈಕೆಗಾಗಿ ದೊಡ್ಡ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಡೀ ರಾಷ್ಟ್ರದಾದ್ಯಂತ ಆರೋಗ್ಯ ಕ್ಷೇತ್ರಕ್ಕೆ ಯುಪಿಯ ಈ  ಆರೋಗ್ಯಕರ ಮಾದರಿಯನ್ನು ಅಳವಡಿಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top