Slide
Slide
Slide
previous arrow
next arrow

ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಖುಲ್ಲಾ ಪಡಿಸುವಂತೆ ಆಗ್ರಹ

300x250 AD

ಸಿದ್ದಾಪುರ; ತಾಲೂಕಿನಾದ್ಯಂತ ನೀರಿನ ಆಹಾಕಾರ ಮುಗಿಲು ಮುಟ್ಟಿದ್ದು, ಆಯಾ ಗ್ರಾಮದ ಜನರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿ0ದ ನೀರಿನ ಬರ ತಲೆದೋರಿದೆ. ನೂತನ ಶಾಸಕರು ಈ ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಖುಲ್ಲಾ ಪಡಿಸುವಂತೆ ಜೆಡಿಎಸ್ ರಾಜ್ಯ ಯುವ ಮುಖಂಡರಾದ ಇಲಿಯಾಸ ಇಬ್ರಾಹಿಂ ಸಾಬ ಆಗ್ರಹಿಸಿದ್ದಾರೆ.

ಅತೀ ಅವಶ್ಯಕವಾಗಿರುವ ಜೀವಜಲ ನೀಡುವಲ್ಲಿ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಈ ಗಂಭೀರ ಸಮಸ್ಯೆಯನ್ನು ಸಿದ್ದಾಪುರ ಜನತೆಯ ಪರವಾಗಿ ಪರಿಹರಿಸಬೇಕಾಗಿದೆ. ಆ ಮೂಲಕ ನೀರಿನ ತೊಂದರೆಯನ್ನು ಪರಿಹರಿಸಕೊಳ್ಳುವುದಕ್ಕೆ ಹೆಚ್ಚಿನ ಸಹಕಾರಿ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top