Slide
Slide
Slide
previous arrow
next arrow

ಕುಳಿಹಕ್ಲಿನ ಶ್ರೀಪಾದ ಹೆಗಡೆ ನಿಧನ: ನಾಳೆ ಅಂತ್ಯಕ್ರಿಯೆ

300x250 AD

ಶಿರಸಿ: ದೇವನಳ್ಳಿ ಬಳಿ ನಡೆದ ಅಪಘಾತದಲ್ಲಿ ಶ್ರೀಪಾದ ಮಂಜುನಾಥ ಹೆಗಡೆ ಕುಳಿಹಕ್ಲು ಮರಣಕ್ಕೀಡಾಗಿದ್ದಾರೆ. ಇವರು ಮತ್ತಿಘಟ್ಟ ಮಂಜಣ್ಣನ 4 ನೇ ಪುತ್ರರಾಗಿದ್ದು, ಶಿರಸಿಯ ಪ್ರತಿಷ್ಠಿತ ‘ಅರುಂಧತಿ’ ಬಳಗದವರಾಗಿದ್ದು ಮತ್ತಿಘಟ್ಟದಲ್ಲಿ ಕೃಷಿಯಲ್ಲಿ ನಿರತರಾಗಿದ್ದರು.

ಇವರು ಉತ್ತಮ ಕೃಷಿಕರೂ, ದೈವಭಕ್ತರೂ, ಅನೇಕ ಸಾಮಾಜಿಕ ಕೆಲಸ ಕಾರ‍್ಯಗಳಿಗೆ ಸದಾ ಬೆಂಬಲ ನೀಡುವ ಕ್ರಿಯಾಶೀಲರೂ ಆಗಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರು,‌ಅಪಾರ ಬಂಧು ಬಳಗವನ್ನಗಲಿದ್ದಾರೆ.

300x250 AD

ಮೃತರ ಅಂತ್ಯಕ್ರಿಯೆ ನಾಳೆ ಜು.5ರಂದು ಬೆಳಿಗ್ಗೆ 8.45ಕ್ಕೆ ಕುಳಿಹಕ್ಲಿನಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top