• Slide
    Slide
    Slide
    previous arrow
    next arrow
  • ಒಕ್ಕಲುತನ ಹುಟ್ಟುವಳಿ ಸಂಘದ ಅಧ್ಯಕ್ಷರಾಗಿ ಚೇತನ್ ನಾಯ್ಕ

    300x250 AD

    ಮುಂಡಗೋಡ: ಇಲ್ಲಿಯ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷರಾಗಿ ಚೇತನ್ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ರವಿಗೌಡ ಪಾಟೀಲ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರರಾಗಿ ಉಪಾಧ್ಯಕ್ಷ ಸಂತೋಷ ಭೋಸಲೆ ನಿಭಾಯಿಸುತ್ತಿದ್ದರು. ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಚೇತನ ನಾಯಕ್ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಚೆತನ್ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಎಂದು ಘೋಷಣೆ ಮಾಡಿದರು.
    ಮಾರ್ಕೆಟಿಂಗ್ ಸೊಸೈಟಿ ಸಹಕಾರಿ ಸಂಘದ ಒಟ್ಟು 14 ಸದಸ್ಯರು ಇದ್ದು, ಅದರಲ್ಲಿ ಬಿಜೆಪಿ 11 ಮತ್ತು ಕಾಂಗ್ರೆಸ್ ಸದಸ್ಯರು 3 ಜನರು ಇದ್ದರು. ಒಬ್ಬರು ಕೆಡಿಸಿಸಿ ಬ್ಯಾಂಕ್ ನಾಮನಿರ್ದೇನ ಸದಸ್ಯ ಸೇರಿ ಒಟ್ಟು ಬಿಜೆಪಿಯ 12 ಸದಸ್ಯರು ಇದ್ದರು.

    300x250 AD

    ನೂತನ ಅಧ್ಯಕ್ಷರಾಗಿ ಆಯ್ಕೆಯಾಧ ಚೇತನ ನಾಯ್ಕರಿಗೆ ಅಭಿನಂದನೆ ಸಲ್ಲಿಸಲು ಶಾಸಕ ಶಿವರಾಮ ಹೆಬ್ಬಾರ ಆಗಮಿಸಿ ಅಭಿನಂದಿಸಿ ರೈತರ ಈ ಸೊಸೈಟಿಯನ್ನು ಚೆನ್ನಾಗಿ ಬೆಳೆಯುವಂತೆ ಕಾರ್ಯನಿರ್ವಹಿಸಬೇಕು ಎಂದು ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top