Slide
Slide
Slide
previous arrow
next arrow

ಜೂ.23ಕ್ಕೆ ಹೊನ್ನಾವರದ ಬಿಜೆಪಿಯ ಬೃಹತ್ ಸಭೆ: ವೆಂಕಟೇಶ ನಾಯಕ

300x250 AD

ಕಾರವಾರ: ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಜೂನ್ 23ರಂದು ಪಕ್ಷದ ಬೂತ್ ಅಧ್ಯಕ್ಷರ ಮೇಲ್ಪಟ್ಟು ಪಕ್ಷದ ಪ್ರಮುಖ ಪದಾಧಿಕಾರಿಗಳ ಸಭೆಯು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರದ ಸಭೆಯ ಬಳಿಕ ಮಧ್ಯಾಹ್ನ ಯಲ್ಲಾಪುರದ ರೈತ ಭವನದಲ್ಲಿ ಸಭೆ ನಡೆಯಲಿದೆ. ಪ್ರತಿ ಸಭೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿ 9 ವರ್ಷಗಳನ್ನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಸರ್ಕಾರದ ಯಶಸ್ಸಿನ ಕುರಿತು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿದ್ದಾರೆ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯ ಜೊತೆಗೆ ಲೋಕಸಭಾ ಚುನಾವಣೆಯ ಪೂರ್ವ ನಡೆಯುತ್ತಿದೆ ಎಂದರು.
ಅOತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರತಿ ಶಕ್ತಿ ಕೇಂದ್ರದಲ್ಲಿ ಯೋಗಕ್ಕೆ ಮಾನ್ಯತೆ ನೀಡಲು ಸರ್ಕಾರ ತೋರಿಸಿದ ಮುತುವರ್ಜಿಯನ್ನು ಯೋಗ ದಿನಾಚರಣೆ ಮೂಲಕ ಆಚರಿಸಲಾಗುವುದು ಎಂದರು. ಪ್ರಮುಖರಾದ ಗೋವಿಂದ ನಾಯ್ಕ, ಮನೋಜ್ ಭಟ್, ಸಂಜಯ ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top